ಭಟ್ಕಳ-ಬೆಂಗಳೂರು ನೂತನ ಬಸ್ಸುಗಳಿಗೆ ಶಾಸಕ ಸುನಿಲ್ ನಾಯ್ಕ ಹಸಿರು ನಿಶಾನೆ

Source: sonews | By Staff Correspondent | Published on 27th February 2020, 11:33 PM | Coastal News |

ಭಟ್ಕಳ: ಭಟ್ಕಳದಿಂದ ಮುರುಢೇಶ್ವರ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣಿಸುವ ಎರಡು ನೂತನ ರಾಜಹಂಸ ಬಸ್ಸುಗಳಿಗೆ ಇಲ್ಲಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ  ಶಾಸಕ ಸುನಿಲ್ ನಾಯ್ಕ ಹಸಿರು ನಿಶಾನೆ ತೋರಿಸಿದರು. 

ನಂತರ ಮಾತನಾಡಿದ ಅವರು ಭಟ್ಕಳದಿಂದ ಬೆಂಗಳೂರಿಗೆ ನಿತ್ಯ ನೂರಾರು ಪ್ರಯಾಣಿಕರು ವಿವಿಧ ಕೆಲಸ ಕಾರ್ಯಗಳಿಗಾಗಿ ಪ್ರಯಾಣಿಸುತ್ತಿದ್ದು ಅವರ ಅನುಕೂಲಕ್ಕಾಗಿ ಬೆಂಗಳೂರಿಗೆ ನೂತನ ಎರಡು ರಾಜಹಂಸಗಳನ್ನು ಬಿಡಲಾಗುತ್ತಿದ್ದು ಪ್ರಯಾಣಿಕರು ಇದರ ಸದೂಪಯೋಗ ಪಡೆಯಬೇಕೆಂದು ಕರೆ ನೀಡಿದರು. 

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ  ಕೃಷ್ಣನಾಯ್ಕ ಆಸರಕೇರಿ, ರಾಜೇಶ್ ನಾಯ್ಕ, ನಾಗಪ್ಪ ನಾಯ್ಕ, ಶಿವಾನಿ ಶಾಂತರಾಮ್ ಮುಂತಾದವರು ಉಪಸ್ಥಿತರಿದ್ದರು.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...