ಕಾರವಾರ : ಕಾರವಾರ ಸಮೀಪ ಆಳ ಸಮುದ್ರ ಮೀನುಗಾರಿಕೆ ನಡೆಸುವ ಯಾಂತ್ರಿಕ ದೋಣಿಯೊಂದು ಮುಳುಗಡೆಯಾಗಿದೆ.
ಉಡುಪಿ ಜಿಲ್ಲೆಯ ಮಲ್ಪೆಯ ಜಾಹ್ನವಿ ಕೋಟ್ಯಾನ್ ಎನ್ನುವವರವ ಬ್ರಾಹ್ಮರಿ ಹೆಸರಿನ ಬೋಟ್ ಮುಳುಗಿದೆ. ಸಪ್ಟೆಂಬರ್ 14ರಂದು ಮಲ್ಪೆ ಬಂದರಿನಿಂದ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿತ್ತು. ಹವಮಾನ ವೈಪರೀತ್ಯ ಉಂಟಾಗಿದ್ದರಿಂದ ಕಾರವಾರ ಬಂದರು ಕಡೆ ಬೋಟ್ ಬರುತಿತ್ತು. ಆದ್ರೆ ಕಡಲ ಅಬ್ಬರಿಂದಾಗಿ ಬೋಟಿನ ತಳಭಾಗದ ಪೈಬರ್ ಒಡೆದು ನೀರು ತುಂಬಿದೆ. ಹೀಗಾಗಿ ಬೋಟಿನಲ್ಲಿದ್ದ ಏಳು ಜನ ಮೀನುಗಾರರನ್ನ ಬೇರೆ ಬೋಟ್ ಮೀನುಗಾರರ ರಕ್ಷಣೆ ಮಾಡಿದ್ದಾರೆ.
ಬೋಟ್ ಅವಘಢದಲ್ಲಿ ಮಾಲೀಕರಿಗೆ ಲಕ್ಷಾಂತರ ರೂಪಾಯಿ ಹಾನಿ ಉಂಟಾಗಿದೆ.