ಭಟ್ಕಳ ಆಝಾದ್‍ನಗರ ರಸ್ತೆಯಲ್ಲಿ ಕುಸಿದ ಟಿಪ್ಪರ್

Source: S O News service | By I.G. Bhatkali | Published on 23rd June 2021, 8:12 PM | Coastal News |

ಭಟ್ಕಳ: ಜಲ್ಲಿಕಲ್ಲು ತುಂಬಿದ ಟಿಪ್ಪರ್‍ವೊಂದು ಇದ್ದಕ್ಕಿದ್ದಂತೆಯೇ ತಾಲೂಕಿನ ಜಾಲಿ ಆಝಾದ್ ನಗರ ರಸ್ತೆಯಲ್ಲಿ ಕುಸಿದು ನಿಂತಿದ್ದು, ಸತತ 3 ಗಂಟೆಯ ಪ್ರಯತ್ನದ ನಂತರ ಜೆಸಿಬಿ ಬಳಸಿ ಟಿಪ್ಪರ್‍ನ್ನು ಮೇಲಕ್ಕೆತ್ತಿರುವ ಘಟನೆ ಮಂಗಳವಾರ ನಡೆದಿದೆ.

ಕೇಬಲ್ ಅಳವಡಿಸಲು ಕೊರೆಯಲಾಗಿದ್ದ ಹೊಂಡಕ್ಕೆ ಮುಚ್ಚಲಾಗಿದ್ದ ಮಣ್ಣು ಮಳೆಗಾಲದಲ್ಲಿ ಕುಸಿದಿರುವುದು ಘಟನೆಗೆ ಕಾರಣ ಆಗಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಆರಂಭದಲ್ಲಿ ಜೆಸಿಬಿಯೊಂದನ್ನು ತಂದು ಟಿಪ್ಪರ್‍ನ್ನು ಮೇಲಕ್ಕೆತ್ತಲು ಪ್ರಯತ್ನಿಸಲಾಯಿತದಾರೂ ಸಫಲವಾಗಲಿಲ್ಲ. ನಂತರ ಟಿಪ್ಪರ್‍ನಲ್ಲಿದ್ದ ಜಲ್ಲಿಯನ್ನು ಖಾಲಿ ಮಾಡಿದ ನಂತರ 2 ಜೆಸಿಬಿ ಯಂತ್ರಗಳನ್ನು ಬಳಸಿ ಟಿಪ್ಪರ್‍ನ್ನು ಹೊಂಡದಿಂದ ಆಚೆ ತೆಗೆದುಕೊಂಡು ಬರಲಾಯಿತು. ಟಿಪ್ಪರ್ ಕುಸಿದ ಕಾರಣ ಆಝಾದ್‍ನಗರ ರಸ್ತೆಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಯಿತು.

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...