ಮುಂಡಗೋಡ : ಗ್ರಾಮಾಂತರ ಪ್ರದೇಶಕ್ಕೂ ಕೊರೊನಾ ತನ್ನ ಅಂಬೆಗಾಲು ಇಡುತ್ತಿರುವುದನ್ನು ನೋಡಿ ತಮ್ಮ ಗ್ರಾಮಕ್ಕೂ ಕೋವಿಡ್-19 ಬರಬಾರದು ಅದು ನಿಯಂತ್ರಣ ಬರುವವರೆಗೂ ಎಂಬ ಧ್ಯೆಯೇ ದಿಂದ ಕಾತೂರ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿಯ ಅಂಗಡಿಕಾರರು ತಮ್ಮ ವಹಿವಾಟು ನಿಲ್ಲಿಸಿ ಅಂಗಡಿಗಳನ್ನು ಬಂದಮಾಡಿ ಸ್ವಯಂ ಘೋಷಿತವಾಗಿ ಲಾಕ್ಡೌನ್ ಮಾಡಿದ್ದಾರೆ.
ಅಂಗಡಿಗಳು ಬಂದಮಾಡಿದ್ದರಿಂದ ಯಾವತ್ತು ಜನರಿಂದ ಜೀನಗುಡುತ್ತಿದ್ದ ಕಾತೂರ ಬಸ್ಸ್ಟ್ಯಾಂಡ್ ಪ್ರದೇಶದಲ್ಲಿ ಜನರ ಸಂದಣಿ ಇಲ್ಲದೆ ಬಿಕೋ ಎನ್ನುತ್ತಿತ್ತು. ಗ್ರಾಮದ ಜನರು ಸಹ ಕೋವಿಡ್ ನಿಯಂತ್ರ ಬರುವವರೆಗೂ ಹೀಗೆ ಮುಂದುವರೆಯಲಿ ಎನ್ನುತ್ತಿದ್ದಾರೆ. ಜೀವ ಇದ್ದರೆ ಮುಂದೆ ಜೀವನ ಸಾಗಿಸಬಹುದು ಆದ್ದರಿಂದ ಗ್ರಾಮಸ್ಥರು ಕೃಷಿ ಚಟುವಟಿಕೆಗಳಿಗೆ ಹಾಗೂ ಅವಶ್ಯಕ ಕೆಲಸಗಳಿಗೆ ಮಾತ್ರ ಹೊರಗೆ ಸಂಚರಿಸುತ್ತಿದ್ದಾರೆ