ಕಾರವಾರ ಸೆ.18 : ವಿದ್ಯುತ್ ಕಡಿತ ಪ್ರತಿ ಬುಧವಾರವೇ ಏಕೆ? ನಿರ್ವಹಣೆ ವಿಷಯವಿದ್ದರೆ ನಗರಾದ್ಯಂತ ವಿದ್ಯುತ್ ಕಡಿತ ಬೇಕೆ? ಇದು ಹೆಸ್ಕಾಂಗೆ ಜಿಲ್ಲಾಧಿಕಾರಿಗಳ ನೇರ ಪ್ರಶ್ನೆ.
ಪ್ರತಿ ಬುಧವಾರ ಕಾರವಾರ ನಗರದಲ್ಲಿ ಹುಬ್ಬಳ್ಳಿ ವಿದ್ಯುತ್ ಪ್ರಸರಣಾ ನಿಗಮ ಹೆಸ್ಕಾಂನಿಂದ ವಿದ್ಯುತ್ ಕಡಿತವಾಗುತ್ತಿದ್ದು ಇದರಿಂದ ಬ್ಯಾಂಕ್, ಕೈಗಾರಿಕೆ, ಗೃಹೋಪಯೋಗ ಸೇರಿದಂತೆ ವಿವಿಧ ವರ್ಗಗಳಿಗೆ ಆಗುತ್ತಿರುವ ಸಮಸ್ಯೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಸೋಮವಾರ ಹೆಸ್ಕಾಂ ಅಧಿಕಾರಿಗಳ ಸಭೆ ನಡೆಸಿ ಹೀಗೆ ಪ್ರಶ್ನಿಸಿದರು.
ವಿದ್ಯುತ್ ಕಡಿತ ಪ್ರತಿ ಬುಧವಾರವೇ ಏಕೆ ಎಂದು ಹೆಸ್ಕಾಂ ಅಧಿಕಾರಿಗಳಿಗೆ ನೇರವಾಗಿ ಪ್ರಶ್ನಿಸಿದ ಅವರು, ಬೇರೆ ಯಾವುದೇ ಜಿಲ್ಲೆಯ ನಗರದಲ್ಲಿ ಬುಧವಾರ ವಿದ್ಯುತ್ ಕಡಿತ ಮಾಡುವುದಿದೆಯೇ? ಹೀಗೆ ಪ್ರತಿವಾರವೂ ಇಡೀದಿನ ವಿದ್ಯುತ್ ಕಡಿತ ಮಾಡಿದರೆ ಬ್ಯಾಂಕ್ ವ್ಯವಹಾರಗಳು, ಕೈಗಾರಿಕೆಗಳಿಗೆ ತೊಂದರೆಯಾಗುವುದಿಲ್ಲವೆ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹೆಸ್ಕಾಂ ಅಧೀಕ್ಷಕ ಎಂಜಿನಿಯರ್ ಎಸ್.ನರಸಿಂಹಮೂರ್ತಿ ಅವರು, ಜಂಪ್ಲೈನ್ ಅಥವಾ ಸಂಪರ್ಕ ಮಾರ್ಗದಲ್ಲಿ ಮರಗಳ ಕೊಂಬೆ ಕಡಿಯುವ ಅಥವಾ ಉಪಕರಣಗಳಿಗೆ ಗ್ರೀಸಿಂಗ್ ಮಾಡುವ ಹಿನ್ನೆಲೆಯಲ್ಲಿ ಒಂದು ದಿನ ನಿರ್ವಹಣೆ ಸಂಬಂಧ ವಿದ್ಯುತ್ ಕಡಿತ ಮಾಡಲಾಗುತ್ತದೆ. ಆದರೆ ಬುಧವಾರವೇ ಮಾಡಬೇಕೆಂದೇನೂ ಇಲ್ಲ. ಅಲ್ಲದೆ ಇಡೀ ನಗರಾದ್ಯಂತ ವಿದ್ಯುತ್ ಕಡಿತ ಮಾಡುವ ಅಗತ್ಯವೂ ಇರುವುದಿಲ್ಲ ಎಂದರು.
ಶನಿವಾರದಂದು ವಿದ್ಯುತ್ ಸಂಪರ್ಕ ಮಾರ್ಗಗಳಲ್ಲಿನ ಸಮಸ್ಯೆ ಪಟ್ಟಿ ಮಾಡಿಕೊಂಡು ಬುಧವಾರ ಅದರ ನಿರ್ವಹಣೆ ಮಾಡುವ ಪರಿಪಾಠ ಇಂದಿನಿಂದಲೂ ಇರುವುದರಿಂದ ಈ ಸಮಸ್ಯೆ ಉದ್ಭವಿಸಿದ್ದು ಬಗೆಹರಿಸಬಹುದಾಗಿದೆ ಎಂದರು.
ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದಿದ್ದರೆ ಕೈಗಾರಿಕೆಗಳು ಹೇಗೆ ಜಿಲ್ಲೆಗೆ ಬರುತ್ತವೆ. ಅಲ್ಲದೆ, ಪ್ರತಿ ಬುಧವಾರ ಕಾರವಾರ ನಗರದ ಬ್ಯಾಂಕ್ ಹಾಗೂ ಕೈಗಾರಿಕೆಗಳಿಂದ ವಿದ್ಯುತ್ ಕಡಿತದ ಬಗ್ಗೆ ಬಹುದಿನಗಳಿಂದ ಆಕ್ಷೇಪವಿದ್ದು ಶೀಘ್ರವೇ ಪರಿಹರಿಸಬೇಕೆಂದು ಹೆಸ್ಕಾಂ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಅಂತಿಮವಾಗಿ ಮುಂದಿನ ಬುಧವಾರ ಒಮ್ಮೆ ನಿರ್ವಹಣಾ ಕಡಿತ ನಂತರ ಮುಂದಿನ ಮೂರು ಬುಧವಾರಗಳು ವಿದ್ಯುತ್ ಕಡಿತ ಇರಬಾರದು. ಅದರ ಫಲಿತಾಂಶ ನೋಡಿಕೊಂಡು ನಾಗರಿಕರಿಗೆ ಸಮರ್ಪಕ ವಿದ್ಯುತ್ ಪೂರೈಸಲು ಕ್ರಮ ವಹಿಸುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಹೆಸ್ಕಾಂನ ಶಿರಸಿ ಅಧೀಕ್ಷಕ ಎಂಜಿನಿಯರ್ ನರಸಿಂಹಮೂರ್ತಿ ಎಸ್, ಕಾರವಾರ ಹೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ದೀಪಕ್, ಸೆಕ್ಷನ್ ಅಧಿಕಾರಿಗಳಾದ ವಸಂತಲಕ್ಷ್ಮೀ, ರಷ್ಮೀ, ನಂಜಯ್ನಾಯ್ಕ್, ಪ್ರಶಾಂತ್ ಹಾಗೂ ಲೀಡ್ ಬ್ಯಾಂಕ್ ಮ್ಯಾನೇಜರ್ ರೇವಣ್ಣಗೌಡ ಉಪಸ್ಥಿತರಿದ್ದರು.
Read These Next
ಮುಗಿಲೆತ್ತರಕ್ಕೆ ಏರಲಿ ಜಿಲ್ಲೆಯ ಖ್ಯಾತಿ : ಜಿಲ್ಲಾಧಿಕಾರಿ
ಕಾರವಾರ : ಸಾರ್ವತ್ರಿಕ ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮತದಾನ ಜಾಗೃತಿಯ ಕುರಿತಂತೆ ಈಗಾಗಲೇ ಹಲವು ...
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...
ಪ್ರಜಾಧ್ವನಿ ಸಮಾವೇಶ: ಭಟ್ಕಳದಿಂದ ಕುಮಟಾ ದ ವರೆಗೆ ಬೈಕ್ ರ್ಯಾಲಿ ಮೂಲಕ ಶಕ್ತಿ ಪ್ರದರ್ಶನ
ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಪ್ರಜಾಧ್ವನಿ- 2 ಸಮಾವೇಶಕ್ಕೂ ಪೂರ್ವ ಬೃಹತ್ ಬೈಕ್ ರ್ಯಾಲಿ ಮೂಲಕ ಕರಾವಳಿಯಲ್ಲಿ ...
ಜೆ.ಡಿ.ಎಸ್. ಮುಖಂಡ ಇನಾಯತುಲ್ಲಾ ಶಾಬಂದ್ರಿ ಕಾಂಗ್ರೆಸ್ ಪಕ್ಷ ಸೇರ್ಪಡೆ
ಕುಮಟಾ: ಜೆ.ಡಿ.ಎಸ್. ಮುಖಂಡ ಹಾಗೂ ಭಟ್ಕಳದ ತಂಝೀಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಜೆ.ಡಿ.ಎಸ್ ಪಕ್ಷ ತ್ಯಜಿಸಿ ...
ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಡಿಕೆಶಿ ಘೋಷಣೆ
ಕುಮಟಾ: ಸಚಿವ ಮಂಕಾಳ ವೈದ್ಯರು, ನಮ್ಮ ಅಭ್ಯರ್ಥಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಲೇಬೇಕೆಂಬ ಸಂಕಲ್ಪ ಮಾಡಿದ್ದಾರೆ. ...
ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ; ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ
ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...