ಕಾರವಾರ: ‘ಗುರುವಂದನಾ’ ವಿಶೇಷ ಅಂಚೆ ಸೇವೆ
ಕಾರವಾರ: ಸಪ್ಟೆಂಬರ್ 5 ರಂದು ಆಚರಿಸಲಾಗುವ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಲು ಕರ್ನಾಟಕ ಅಂಚೆ ಇಲಾಖೆ ‘ಗುರುವಂದನಾ’ ಎನ್ನುವ ಸೇವೆಯನ್ನು ಪರಿಚಯಿಸುತ್ತಿದೆ.
‘ಗುರುವಂದನಾ’ ಸೇವೆಯನ್ನು https://www.karnatakapost.gov.in/Guru_Vandana ಅಥವಾ ಕರ್ನಾಟಕ ಪೋಸ್ಟ್ ಹೋಂ ಪೇಜ್ನಲ್ಲಿ ‘ಗುರುವಂದನಾ’ ಲಿಂಕ್ಗೆ ಭೇಟಿ ನೀಡಿ ಸಂದೇಶವನ್ನು ಕಿರುಕಾಣಿಕೆಯೊಂದಿಗೆ ಆಯ್ಕೆ ಮಾಡಬಹುದು.
ಆಯ್ದ ಸಂದೇಶ ಮತ್ತು ಕಿರುಕಾಣಿಕೆಯನ್ನು ಸ್ಪೀಡ್ ಪೋಸ್ಟ್ನ ವಿಶೇಷ ಲಕೋಟೆಯಲ್ಲಿ ಕಳುಹಿಸಲಾಗುತ್ತದೆ. ಆನ್ಲೈನ್ನಲ್ಲಿ 100 ರೂ ಪಾವತಿಸಬೇಕಾಗಿದ್ದು, ದೇಶದ ಯಾವುದೇ ಭಾಗದಿಂದ ದೇಶದ ಯಾವುದೇ ಸ್ಥಳದಲ್ಲಿ ವಾಸಿಸುವ ಶಿಕ್ಷಕರಿಗೆ ಕಳುಹಿಸಬಹುದಾಗಿದೆ.
‘ಗುರುವಂದನಾ’ ಸೇವೆಯು ಆ. 31ರ ವರೆಗೆ ಅಥವಾ ದಾಸ್ತಾನು ಮುಗಿಯುವವರೆಗೆ ಲಭ್ಯವಿರುತ್ತದೆ ಜಿಲ್ಲೆಯ ಜನರು ಇದರ ಪ್ರಯೋಜನ ಪಡೆಯಬೇಂದು ಜಿಲ್ಲಾ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.