ಕಾರವಾರ: ಮೀನು ಪಾಶುವಾರು ಹಕ್ಕನ್ನು ಗುತ್ತಿಗೆ ಮೂಲಕ ವಿಲೇವಾರಿ; ಜೂ 4 ರೊಳಗೆ ಅರ್ಜಿ ಸಲ್ಲಿಕೆಗೆ ಅಹ್ವಾನ್
ಕಾರವಾರ: ತಾಲೂಕಿನ ಅರ್ಥಲಾವ್ ಕೆರೆ, ಹಣಕೋಣ ಕೆರೆ, ಹಾಗೂ ಕಾಳಿ ನದಿ ಭಾಗದ ಮಾಡಸಾಯಿ, ಸಾವಂತವಾಡಾ, ಕಿನ್ನರ , ನಂದನಗದ್ದಾ, ಸದಾಶಿವಗಡ ಸೇರಿದಂತೆ ನದಿ ಭಾಗದ ಹಾಗೂ ಕೆರೆಗಳ ಮೀನು ಪಾಶುವಾರು ಹಕ್ಕನ್ನು ಸರಕಾರದ ನಿಯಮದ ಮೇರೆಗೆ ಅರ್ಹ ಮೀನುಗಾರರ ಸಂಘಕ್ಕೆ 5 ವರ್ಷಗಳ ಅವಧಿಗೆ ಗುತ್ತಿಗೆ ಮೂಲಕ ವಿಲೇವಾರಿ ಮಾಡಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಜೂ 4 ರೊಳಗೆ ಅರ್ಜಿ ಸಲ್ಲಿಬೇಕು.
ಹೆಚ್ಚಿನ ಮಾಹಿತಿಗಾಗಿ ಇಲಾಖಾ ದೂರವಾಣಿ ಸಂಖ್ಯೆ 7996804107 ಗೆ ಸಂಪರ್ಕಿಸಿ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.