ಮುಂಡಗೋಡ : ರಾಶಿ ಹಾಕಿದ ಗೋವಿನ ಜೋಳದ ತೆನೆಗಳಿಗೆ ಬೆಂಕಿ ತುಗುಲಿ ರೈತನಿಗೆ ಅಪಾರ ನಷ್ಟವಾದ ಘಟನೆ ತಾಲೂಕಿನ ಹುನಗುಂದ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಹುನಗುಂದ ಗ್ರಾಮದ ರೈತರಾದ ತುಕಾರಾಮ ಹೊನ್ನಳ್ಳಿ ಹಾಗೂ ಈಶ್ವರ ಹೊನ್ನಳ್ಳಿ ಎಂಬುವವರ 8 ಎಕರೆ ಹೊಲದಲ್ಲಿ ಬೆಳೆಯಲಾಗಿದ್ದ ಗೋವಿನಜೋಳದ ತೆನೆಗಳನ್ನು ಕಾಳು ತೆಗೆಯಲು ಒಣಗಿಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಅಕಸ್ಮೀಕವಾಗಿ ತಗುಲಿದ ಬೆಂಕಿ ಒಣಹಾಕಿದ ತೆನೆಗಳ ರಾಶಿಗೆ ಬೆಂಕಿತಗುಲಿದೆ. ಬೆಂಕಿ ತಗುಲಿದ ವಿಷಯವನ್ನು ಅಗ್ನಿಶಾಮಕ ದಳಕ್ಕೆ ತಿಳಿಸುತ್ತಿದ್ದಂತೆ ಬೆಂಕಿ ಆರಿಸಲು ಬಂದು ಅಗ್ನಿಶಾಮಕದಳ ಶ್ರಮಪಟ್ಟರೂ ಬೆಂಕಿಯು ಗೋವಿನಜೋಳದ ತೆನೆಗಳನ್ನು ತನ್ನ ಒಡಲಿಗೆ ಹಾಕಿಕೊಂಡಿದ್ದರಿಂದ ರೈತನಿಗೆ ಅಪಾರವಾದ ನಷ್ಟವುಂಟಾಗಿದೆ.
ಅಗ್ನಿಶಾಮಕ ದಳದ ಠಾಣಾ ಪ್ರಭಾರಿ ಅಧಿಕಾರಿ ಕಲಮಪ್ಪ ಮಾಳಗಿ, ಅಡವೆಪ್ಪ ಕುರವಿನಕೊಪ್ಪ, ಮಂಜುನಾಥ ಪಠಗಾರ, ಸಂತೋಷ ಪಾಟೀಲ, ದುರ್ಗಪ್ಪ ಹರಿಜನ, ಕಿರಣ ರಾಯ್ಕರ ಬೆಂಕಿ ಆರಿಸುವ ಕಾರ್ಯಾಚಾರಣೆಯಲ್ಲಿ ಪಾಲ್ಗೊಂಡಿದ್ದರು