ಕಾರವಾರ: ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡಲು ಅಂತಿಮ ಅವಕಾಶ

Source: S.O. News service | By S O News | Published on 31st July 2021, 7:26 PM | Coastal News |

ಕಾರವಾರ: ನ್ಯಾಯಬೆಲೆ ಅಂಗಡಿಗಳಲ್ಲಿ ಇದುವರೆಗೆ ಇ-ಕೆವೈಸಿ ಮಾಡಿಸದೇ ಇರುವ ಪಡಿತರ ಚೀಟಿದಾರರಿಗೆ ಇ-ಕೆವೈಸಿಯನ್ನು ಮಾಡಿಸಿಕೊಳ್ಳಲು ಅಂತಿಮ ಕಾಲವಕಾಶ ನೀಡಲಾಗಿದೆ.

2021 ರ ಆಗಸ್ಟ್ ಮಾಹೆಯಲ್ಲಿ ಇ-ಕೆವೈಸಿ ಮಾಡಲು ಕೊನೆಯ ಅವಕಾಶ ನೀಡಲಾಗಿದ್ದು ನ್ಯಾಯಬೆಲೆ ಅಂಗಡಿಗಳಲ್ಲಿ ಅಗಸ್ಟ್ 1ರಿಂದ 10ರ ವರೆಗೆ ಇ-ಕೆವೈಸಿಯನ್ನು ಮಾಡಲಾಗುವುದು. ನಂತರ ಇ-ಕೆವೈಸಿ ಮಾಡದೇ ಪಡಿತರ ಚೀಟಿದಾರರ ಪಡಿತರವನ್ನು ತಡೆಹಿಡಿಯಲಾಗುವುದು.

ಇ-ಕೆವೈಸಿ ಸಂಗ್ರಹಣೆಗೆ ಯಾರಾದರೂ ಹಣ ಕೇಳಿದ್ದಲ್ಲಿ ಅಥವಾ ದೂರುಗಳಿದ್ದಲ್ಲಿ ಮತ್ತು ಇತರೆ ಮಾಹಿತಿಗೆ ಸಂಬಂಧಪಟ್ಟಂತೆ ಆಯಾ ತಾಲೂಕು ತಹಶೀಲ್ದಾರರು ಮತ್ತು ಜಿಲ್ಲಾ ಆಹಾರ & ನಾಗರಿಕ ಸರಬರಾಜು ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಆಹಾರ & ನಾಗರಿಕ ಸರಬರಾಜು ಇಲಾಖೆ ಕಾರವಾರ ಕಚೇರಿ ದೂರವಾಣಿ ಸಂಖ್ಯೆ 08382-226464. ಹಾಗೂ ಕಾರವಾರ ತಹಶೀಲ್ದಾರ ಕಚೇರಿ 9448609712, 08382-226331, ಅಂಕೋಲಾ ತಹಶೀಲ್ದಾರ ಕಚೇರಿ, 9845397078 08388-230243, ಕುಮಟಾ 9481557642, 08386-222054, ಹೊನ್ನಾವರ 9980135812, 08387-220262, ಭಟ್ಕಳ 8105180342, 08385-226422, ಶಿರಸಿ 9739717754, 08384-226383, ಸಿದ್ದಾಪುರ 8861641607, 08389-230127, ಯಲ್ಲಾಪುರ 8867113551, 08419-261129, ಮುಂಡಗೋಡ 9448893878, 08301-222122, ಹಳಿಯಾಳ 7483441715, 08284-220134, ದಾಂಡೇಲಿ 7676781182 , ಜೋಯಿಡಾ 9448825842, 08383-282723. ಅನ್ನು ಸಂಪರ್ಕಿಸಬಹುದಾಗಿದೆ

ಎಂದು ಆಹಾರ & ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಮಂಜುನಾಥ ರೇವಣಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...