ಲೈಂಗಿಕ ದೌರ್ಜನ್ಯಕ್ಕೊಳಗಾದ ಮಕ್ಕಳ ಗುರುತು ಬಹಿರಂಗ ಪಡಿಸದೇ ಇರುವಂತೆ ಜಿಲ್ಲಾಧಿಕಾರಿ ಮನವಿ

Source: SOnews | By Staff Correspondent | Published on 13th June 2024, 8:02 PM | Coastal News |

 

ಕಾರವಾರ: ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015. ತಿದ್ದುಪಡಿ ಕಾಯ್ದೆ 2021, ಹಾಗೂ ಮಾದರಿ ನಿಯಮ 2016, ತಿದ್ದುಪಡಿ ನಿಯಮಗಳು 2022. ಸೆಕ್ಷನ್ 74(1) (Prohibitaion on disclosure of Identity of Children)2012, 23(4) ಪ್ರಕಾರ ಯಾವುದೇ ವೃತ್ತ ಪತ್ರಿಕೆಯಲ್ಲಿ ನಿಯತಕಾಲಿಕವಾಗಲಿ ಅಥವಾ ದೃಶ್ಯ ಶ್ರವಣ ಮಾಧ್ಯಮಗಳಲ್ಲಿ ಅಥವಾ ಸಾಮಾಜಿಕ ಜಾಲ ತಾಣಗಳಲ್ಲಿ ಅಥವಾ ಸಂವಹನದ ಇನ್ನಿತರ ವಿಧಗಳಲ್ಲಿ ಯಾವುದೇ ವಿಚಾರಣೆ ಅಥವಾ ತನಿಖೆ ಅಥವಾ ನ್ಯಾಯಿಕ ನಡವಳಿಗಳ ಕುರಿತಂತೆ ಕಾಯ್ದೆಯೊಂದಿಗೆ ಸಂಘರ್ಷದಲ್ಲಿರುವAತಹ ಮಗುವಿನಅಥವಾ ಪಾಲನೆ ಮತ್ತು ಸಂರಕ್ಷಣೆಯ ಅಗತ್ಯವಿರುವಂತಹ ಮಗುವಿನ ಅಥವಾ ಸಂತ್ರಸ್ಥ ಮಗುವಿನ ಅಥವಾಯಾವುದೇ ಅಪರಾದಧ ಸಂಬA ಸಾಕ್ಷಿಯಾಗಿರುವಂತಹ ಮಗುವಿನ ಗುರುತನ್ನು ತಿಳಿಸಬಹುದಾದಹೆಸರು/ವಿಳಾಸ/ಶಾಲೆ/ಇನ್ನಿತರ ವಿವರಗಳು ಅಥವಾ ಮಗುವಿನ ಭಾವಚಿತ್ರವನ್ನು ಪ್ರಕಟಿಸುವಂತಿಲ್ಲ.

ಒಂದು ವೇಳೆ ಪ್ರಕಟವಾದಲ್ಲಿ, ಪ್ರಕಟಿ ಪಡಿಸಿದವರ ವಿರುದ್ಧ, ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015, ತಿದ್ದುಪಡಿ ಕಾಯ್ದೆ 2021, ಹಾಗೂ ಮಾದರಿ ನಿಯಮ 2016. ತಿದ್ದುಪಡಿ ನಿಯಮಗಳು 2022, ಸೆಕ್ಷನ್ 74(3) ಉಪಪ್ರಕರಣ (1) ನ್ನು ಉಲ್ಲಂಘಿಸುವAತಹ ಯಾರೇ ವ್ಯಕ್ತಿಯು ಆರು ತಿಂಗಳವರೆಗೆ ವಿಸ್ತರಿಸಲ್ಪಡಬಹುದಾದ ಕಾರಾಗೃಹ ದಂಡನೆ ಅಥವಾ 2 ಲಕ್ಷ ರೂ ವಿಸ್ತರಿಸಲ್ಪಡಬಹುದಾದ ಜುಲ್ತಾನೆ ಅಥವಾ ಉಭಯ ಶಿಕ್ಷೆಗಳಿಗೂ ಸಹ ದಂಡನೀಯವಾಗಿದೆ.

ಇತ್ತಿಚಿನ ದಿನಗಳಲ್ಲಿ ಕೆಲವೊಂದು ದಿನಪತ್ರಿಕೆಗಳಲ್ಲಿರುವ ವರದಿಯನ್ನು ಗಮನಿಸಿದಾಗ , ನೇರವಾಗಿ ಮಗುವಿನ ಹೆಸರನ್ನು ಹಾಗೂ ಇತರೆ ವಿಷಯವನ್ನು ಪ್ರಸ್ಥಾಪಿಸದಿದ್ದರೂ ಶಾಲೆಯ ಹೆಸರು ವರದಿಯಲ್ಲಿ ಕಂಡು ಬಂದಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ವರದಿಯಾಗುವ ಎಲ್ಲಾ ದಿನಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಮೇಲ್ಕಾಣಿಸಿದ ಮಕ್ಕಳಿಗೆ ಸಂಬAಧಿಸಿದ ಮಾಹಿತಿಯನ್ನು ಬಹಿರಂಗ ಪಡಿಸದಂತೆ ಎಚ್ಚರ ವಹಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದೆ.

 

Read These Next

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಅಪರಾಧಿ :ನ್ಯಾಯಾಲಯ ತೀರ್ಪು

ಬೆಂಗಳೂರು: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾರವಾರ ಶಾಸಕ ಸತೀಶ್ ಸೈಲ್ ಸೇರಿದಂತೆ ಈ ...

ಸ್ಕ್ಯಾನಿಂಗ್ ಸೆಂಟರ್‌ಗಳ ತಪಾಸಣೆ ನಿರಂತರವಾಗಿರಲಿ; ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ

ಜಿಲ್ಲೆಯಲ್ಲಿರುವ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ನಿಯಮಿತವಾಗಿ ತಪಾಸಣೆ ಮಾಡುವ ಮೂಲಕ, ಜಿಲ್ಲೆಯಲ್ಲಿ ಗರ್ಭ ಪೂರ್ವ ಮತ್ತು ...

ಕಾರವಾರ: ದೀಪಾವಳಿ ಹಬ್ಬವನ್ನು ಬೆಳಕಿನ ಹಬ್ಬವಾಗಿ ಮತ್ತು ಪರಿಸರ ಸ್ನೇಹಿಯಾಗಿ ಆಚರಿಸಿ; ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ

ತಿ ವರ್ಷವು ದೀಪಾವಳಿ ಹಬ್ಬವನ್ನು ಸಾಂಪ್ರ‍್ರದಾಯಿಕವಾಗಿ ದೇಶದಾದ್ಯಂತ ಆಚರಿಸಲಾಗುತ್ತಿದ್ದು, ದೀಪಾವಳಿ ಹಬ್ಬವನ್ನು ದೀಪಗಳ ಸಾಲಿನ ...