ಮುಂಡಗೋಡ : ತಾಲೂಕ ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷ ಹಾಗೂ ಪಟ್ಟಣ ಪಂಚಾಯತ್ 7ನೇ ವಾರ್ಡಿನ್ ಸದಸ್ಯರು ಬಡವರಿಗೆ ಅಗತ್ಯ ದಿನಸಿ ಸಾಮಾಗ್ರಿಗಳನ್ನು ವಿತರಿಸಿದರು.
ಕಿರಾಣಿ ವ್ಯಾಪಾರಿ ಮಹ್ಮದಗೌಸ ಮಕಾನದಾರ ನೇತೃತ್ವದಲ್ಲಿ ಮಹ್ಮದರಫೀಕ ಶೇಖ(ಲಾರಾ), ಆಸೀಫ ಮಕಾನದಾರ ಮತ್ತು ಇರ್ಫಾನ ಸವಣೂರ 7ನೇ ವಾರ್ಡ್ ಸೇರಿದಂತೆ ಪಟ್ಟಣದ ಕಡುಬಡತನದ ಕುಟುಂಬಗಳನ್ನು ಗುರುತಿಸಿ ತಲಾ 1ಕೆಜಿ ಮೈದಾಹಿಟ್ಟು, ಸಕ್ಕರೆ, ಕೆಸರಿ ರವಾ, ಅಡಿಗೆ ಎಣ್ಣೆ.ಅರ್ಧಕೆಜಿ ಉಪ್ಪು, 100 ಗ್ರಾಂ ಚಹಾಪುಡಿ, 50 ಗ್ರಾಂ ಅರಿಶಿಣ ಪುಡಿ. 50 ಗ್ರಾಂ ಜೀರಗಿ ಹಾಗೂ 2 ಮೇರಿ ಬಿಸ್ಕೀಟ್ ಒಳಗೊಂಡಂತಹ 400ರೂ ಬೆಲೆಹೊಂದಿರುವ ಒಂದು ಕಿಟ್ಟ್ ಅದರಂತೆ 100 ಕಿಟ್ಟಗಳನ್ನು ವಿತರಣೆ ಮಾಡಿದರು. ಪ್ರತಿಯೊಂದು ಕಿಟ್ ಜತೆಯಲ್ಲಿ 12 ತತ್ತಿಗಳನ್ನು ತತ್ತಿ ಮತ್ತು ಚಿಕನ್ ವ್ಯಾಪಾರಿ ಬಸೀರ ಹಾನಗಲ್(ಪಾಪಡಿ) ನೀಡಿದರು.