ಕಾರವಾರ: ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಧನಂಜಯ ಹೆಗಡೆ ಅವರಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.
ಜಿಲ್ಲೆಯಲ್ಲಿ 38 ವರ್ಷ ಸೇವೆ ಸಲ್ಲಿಸಿ ಶನಿವಾರ ವಯೋನಿವೃತ್ತಿ ಹೊಂದಿದ ಅವರನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸನ್ಮಾನಿಸಿ ಮಾತನಾಡಿದ ಜಿಲ್ಲಾಧಿಕಾರಿ, ಕೋವಿಡ್ ಎರಡನೇ ಅಲೆಯನ್ನು ಜಿಲ್ಲೆಯು ಸಮರ್ಥವಾಗಿ ಎದುರಿಸುವಲ್ಲಿ ಧನಂಜಯ ಅವರ ಪಾತ್ರ ಅಪಾರ. ಕುಮಟಾದ ಆಕ್ಸಿಜನ್ ಘಟಕದಿಂದ ಜಿಲ್ಲೆಯ ಯಾವುದೇ ತಾಲೂಕಿಗೆ ಕೊರತೆಯಾಗದಂತೆ ಆಕ್ಸಿಜನ್ ಪೂರೈಸಿದ ಇವರ ಕಾರ್ಯ ಕ್ಷಮತೆಗೆ ಜಿಲ್ಲಾಡಳಿತ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜನತೆ ಋಣಿಯಾಗಿರುತ್ತದೆ ಎಂದರು. ನಂತರ ಮಾತನಾಡಿದ ಧನಂಜಯ ಹೆಗಡೆ, ಕೋವಿಡ್ ಸಮಯದಲ್ಲಿ ಉತ್ತಮ ಕಾರ್ಯ ನಿರ್ವಹಿಸಲು ಜಿಲ್ಲಾಡಳಿತದವು ಸಹಕಾರ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಅಪರ ಜಿಲ್ಲಾಧಿಕಾರಿ ಹೆಚ್.ಕೆ.ಕೃಷ್ಣಮೂರ್ತಿ, ಡಿ.ಹೆಚ್.ಒ ಶರದ್ ನಾಯಕ್ ಉಪಸ್ಥಿತರಿದ್ದರು.