ಕಾರವಾರ : ಜಿಲ್ಲೆಯಾದ್ಯಂತ ಹೋಳಿ ಹಬ್ಬವನ್ನು ಆಚರಿಸುತ್ತಿರುವದರಿಂದ, ಈ ಸಮಯದಲ್ಲಿ ಮದ್ಯ ಸೇವಿಸಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆತೋಂದರೆ ಮಾಡುವ ಸಾದ್ಯತೆ ಇರುವದರಿಂದ ಅಂದು ಎಲ್ಲಾ ವೈನ ಶಾಪ್ ಮತ್ತು ಬಾರಗಳಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ್ ಆದೇಶಿಸಿದ್ದಾರೆ.
ದಾಂಡೇಲಿ, ಹಳಿಯಾಳ, ಜೋಯಿಡಾ, ಭಟ್ಕಳ,ಕುಮಟಾ, ಹೊನ್ನಾವರ, ಕಾರವಾರ, ಅಂಕೋಲಾ ತಾಲೂಕುಗಳಲ್ಲಿ ಮಾರ್ಚ 20 ಮತ್ತು 21 ಎರಡು ದಿನ, ಶಿರಸಿ ಮತ್ತು ಸಿದ್ದಾಪುರ ತಾಲೂಕುಗಳಲ್ಲಿ ಮಾರ್ಚ 21, ಯಲ್ಲಾಪುರ ತಾಲೂಕಿನಲ್ಲಿ ಮಾರ್ಚ 22, ಮುಂಡಗೋಡ ತಾಲೂಕಿನಲ್ಲಿ ಮಾರ್ಚ 21 ಮತ್ತು 26 ರಂದು ಎಲ್ಲಾ ರೀತಿಯ ಮದ್ಯ ಸಾಗಾಟ ಹಾಗೂ ಮಾರಾಟವನ್ನು ನಿಷೇಧಿಸಿಸಲಾಗಿದೆ.