ಹೊಸದಿಲ್ಲಿ: ಗಣರಾಜ್ಯೋತ್ಸವದ ದಿನ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಪ್ರಧಾನ ಆರೋಪಿಯೋರ್ವನನ್ನು ದಿಲ್ಲಿ ಪೊಲೀಸರ ವಿಶೇಷ ಘಟಕ ದಿಲ್ಲಿಯ ಪೀತಾಂಪುರದಿಂದ ಮಂಗಳವಾರ ಬಂಧಿಸಿದೆ ಹಾಗೂ ಆತನಿಂದ ಎರಡು ಖಡ್ಗಗಳನ್ನು ವಶಪಡಿಸಿಕೊಂಡಿದೆ.
ಕೃಷಿ ಕಾಯ್ದೆಗಳ ವಿರುದ್ದ ರೈತರ ಒಕ್ಕೂಟಗಳು ಆಯೋಜಿಸಿದ್ದ ಟ್ರ್ಯಾಕ್ಟರ್ ರಾಲಿಯ ಸಂದರ್ಭ ಖಡ್ಡಬೀಸುತ್ತಿರುವವೀಡಿಯೊಹಾಗೂ ಛಾಯಾಚಿತ್ರ ಜನವರಿ 26ರಿಂದ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೆಯಾದ ಬಳಿಕ ಆರೋಪಿ 30 ವರ್ಷದ ಮೆಕ್ಯಾನಿಕ್ ಮಣಿಂದರ್ ಸಿಂಗ್ ಆಲಿಯಾಸ್ ಮೋನಿ 'ಮೋಸ್ಟ್ ವಾಂಟೆಡ್' ವ್ಯಕ್ತಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕೆಂಪು ಕೋಟೆಯ ಹಿಂಸಾಚಾರ ಪ್ರಕರಣದ 'ಮೋಸ್ಟ್ ವಾಂಟೆಡ್' ಮಣಿಂದರ್ ಸಿಂಗ್ ಅವರನ್ನು ಪೀತಾಂಪುರ ಬಸ್ ನಿಲ್ದಾಣ ದಿಂದ ಮಂಗಳವಾರ ಬಂಧಿಸಲಾಗಿದೆ. ಇದರೊಂದಿಗೆ ದಿಲ್ಲಿಯ ಸ್ವರೂಪ್ ನಗರದಲ್ಲಿರುವ ಅವರ ಮನೆಯಿಂದ ಎರಡು ಖಡ್ಗಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ನಾನೊಬ್ಬಳು ಆರೋಪಿಯಾಗಿ ದೇನೆಂಬುದನ್ನು ಮರೆಯದಿರಿ ಹಾಗೂ ಕೇವಲ ಧ್ವನಿಯೆತ್ತಿದ್ದಕ್ಕಾಗಿ ನಾನು ಆರೋಪಿಯಾಗಿದ್ದೆ ಎಂದು ರಮಣಿ ತಿಳಿಸಿದ್ದಾರೆ.
ಲೈಂಗಿಕ ಕಿರುಕುಳದ ವಿರುದ್ಧ ಧ್ವನಿಯೆತ್ತಿದ ಎಲ್ಲಾ ಮಹಿಳೆಯರ ಪರವಾಗಿ ದೊರೆತ ಸಮರ್ಥನೆ ಇದಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ತನ್ನ ಪರವಾಗಿ ಸಾಕ್ಷಿ ನುಡಿದ ಗಝಾಲಾ ವಹಾಬ್ ಹಾಗೂ ನಿಲೋಫರ್ ವೆಂಕಟರಾಮನ್ ಅವರಿಗೂ ರಮಣಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.