ತೌತೆ ಚಂಡಮಾರುತದಿಂದ ಗುಜರಾತ್ನಲ್ಲಿ ಸತ್ತವರ ಸಂಖ್ಯೆ 53
ಅಹಮದಾಬಾದ್: ತೌತೆ ಚಂಡಮಾರುತದಿಂದ ಗುಜರಾತ್ ರಾಜ್ಯದ ವಿವಿಧೆಡೆ ಸುಮಾರು 53 ಮಂದಿ ಸಾವಿಗೀಡಾಗಿದ್ದಾರೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.
ಬಹುತೇಕ ಅನಾಹುತಗಳು ಗೋಡೆ ಕುಸಿತದಂತಹ ಘಟನೆಗಳಿಂದಾಗಿಯೇ ನಡೆದಿವೆ ಎಂದು ರಾಜ್ಯ ತುರ್ತು ಕಾರ್ಯಾಚರಣಾ ಕೇಂದ್ರದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ವೈಮಾನಿಕ ಸಮೀಕ್ಷೆ ನಡೆಸಿ ರಾಜ್ಯಕ್ಕೆ ತುರ್ತು ಪರಿಹಾರ ಕಾರ್ಯಗಳಿಗಾಗಿ ₹ 1,000 ಕೋಟಿ ನೆರವು ಪ್ರಕಟಿಸಿದ್ದರು.
ಚಂಡಮಾರುತದಿಂದ ಆದ ಅವಘಡಗಳಲ್ಲಿ ಗಾಯಗೊಂಡವರಿಗೆ ₹ 50,000 ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರು ಪ್ರಕಟಿಸಿದ್ದಾರೆ.