ಸರಕಾರದಿಂದ ಗರಿಷ್ಠ ಸವಲತ್ತು ಪಡೆಯುವ ಜನ; ಭಟ್ಕಳ 22 ಬೂತ್ಗಳಲ್ಲಿ ಬಿಜೆಪಿಗೆ ಮತ ಹಾಕುವುದಿಲ್ಲ; ಭಟ್ಕಳದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ
ಭಟ್ಕಳ: ನಾವು ಯು.ಟಿ.ಖಾದರ್, ಹ್ಯಾರೀಸ್, ಜಾರ್ಜ, ಜಮೀರ್ ಎಲ್ಲರಿಗೂ ಮತ ನೀಡಿ ಚುನಾವಣೆಯನ್ನು ಗೆಲ್ಲಿಸುತ್ತೇವೆ. ಆದರೆ ಭಟ್ಕಳದ 22 ಮತಗಟ್ಟೆಗಳಲ್ಲಿ ಸರಕಾರದಿಂದ ಗರಿಷ್ಠ ಸವಲತ್ತು ಪಡೆಯುವ ಜನ ಬಿಜೆಪಿಗೆ ಮತ ಹಾಕುವುದಿಲ್ಲ. ಇಂತವರು ನಮಗೆ ಸೆಕ್ಯೂಲರ್ ಪಾಠವನ್ನು ಹೇಳಲು ಬರುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಅವರು ರವಿವಾರ ಸಂಜೆ ಭಟ್ಕಳ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು, ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು. ನಮ್ಮ ರಕ್ತದಲ್ಲಿಯೇ ಸರ್ವ ಧರ್ಮ ಸಮಭಾವ ಇದೆ. ಭಾರತದಲ್ಲಿ ಪ್ರತಿ 50ಕಿಮೀ. ಅಂತರದಲ್ಲಿ ಆಹಾರ ಪದ್ಧತಿ, ಭಾಷೆಯಲ್ಲಿ ವ್ಯತ್ಯಾಸ ಇರುವುದು ಕಂಡು ಬರುತ್ತದೆ. ನಾವೂ ಭಟ್ಕಳದ ತಂಝೀಮ್ನಂತೆ ಆಗಿದ್ದರೆ ದೇಶದಲ್ಲಿ ಇದು ಸಾಧ್ಯವಾಗುತ್ತಿರಲಿಲ್ಲ. ಭಟ್ಕಳದ ನಾಗಬನದ ಇತಿಹಾಸ 800 ವರ್ಷಗಳಿಗೂ ಹಳೆಯದಾಗಿದ್ದರೆ, ಭಟ್ಕಳ ಮುಸ್ಲೀಮರ ಇತಿಹಾಸ 300 ವರ್ಷಗಳದ್ದಾಗಿದೆ. ಆದರೂ ನಾಗಬನದ ಪೂಜೆಗೆ ಅಡ್ಡಿ ಬಂದಿತ್ತು. ಬಿಜೆಪಿ ಇಂತಹ ತಾತ್ವಿಕ ಕಾರಣವನ್ನು ಮುಂದೆ ಇಟ್ಟುಕೊಂಡು ಚುನಾವಣೆ ಎದುರಿಸುತ್ತದೆ. ಹಿಂದುತ್ವಕ್ಕೆ ಬದ್ಧತೆ, ಅಭಿವೃದ್ಧಿಗೆ ಆದ್ಯತೆ ನಮ್ಮ ಧ್ಯೇಯವಾಗಿದೆ. ಕರ್ನಾಟಕ ಸರಕಾರವನ್ನು ಮೋದಿಯವರ ಸರಕಾರದೊಂದಿಗೆ ತುಲನೆ
ನಮ್ಮ ಪ್ರಶ್ನೆಗೆ ಸಿ.ಟಿ.ರವಿ ಕೊಟ್ಟ ಉತ್ತರವೇನು? * ಖಾದರ್, ಜಾರ್ಜ, ಜಮೀರ್, ಹ್ಯಾರೀಸ್ ಅಂತವರಿಗೆ ಮತ ಹಾಕುತ್ತೇವೆ. ಭಟ್ಕಳದ 22 ಬೂತ್ಗಳಲ್ಲಿ ಬಿಜೆಪಿಗೆ ಮತ ಇಲ್ಲ ಎನ್ನುತ್ತೀರಿ. ಆದರೆ ಆ ಬೂತ್ಗಳಿಂದಲೂ ಹಿಂದೂಗಳೇ ಆಗಿರುವ ಕಾಂಗ್ರೆಸ್ಸಿನ ಆರ್.ಎನ್.ನಾಯ್ಕ, ಜೆ.ಡಿ.ನಾಯ್ಕ, ಮಂಕಾಳರಿಗೆ ಮತ ಬಂದಿದೆ. ನೀವು ಕಮ್ಯೂನಲ್ ಎನ್ನುವ ಕಾರಣದಿಂದ ಆ ರೀತಿ ಆಗಿರಬಹುದಲ್ಲವೇ? * ಮಾತು ಮಾತಿಗೆ ನಾವು ಪಾಂಡವರು, ಉಳಿದವರು ಕೌರವರು ಎನ್ನುತ್ತೀರಿ. ನಿಮ್ಮದೇ ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಾಂಡವರೆಲ್ಲ ಕೌರವರ ಪಾರ್ಟಿಯನ್ನು ಸೇರಲು ಸಜ್ಜಾಗಿದ್ದಾರಲ್ಲ? * ಧರ್ಮ, ನ್ಯಾಯದ ಬಗ್ಗೆ ಮಾತನಾಡುವ ಬಿಜೆಪಿ ಹೊಡೆದು ಹಾಕಿ ರಾಜಕಾರಣದಿಂದ ಚುನಾವಣೆಯನ್ನು ಗೆಲ್ಲಲು ಹೊರಟಿದೆ..... |
ಮಾಡಬೇಡಿ. ನಮಗೆ ಎರಡು ಅವಧಿಯಲ್ಲಿಯೂ ಬಹುಮತ ಸಿಗದ ಕಾರಣಕ್ಕೆ ಅವರಿವರನ್ನು ಸೇರಿಸಿಕೊಂಡು ಸರಕಾರ ರಚಿಸಿದ ಕಾರಣ ಇಂತಹ ಪರಿಸ್ಥಿತಿ ಎದುರಾಗಿದೆ. ಆದರೆ ಈ ಬಾರಿ ಅಂತಹ ಪರಿಸ್ಥಿತಿ ಮರುಕಳಿಸಬಾರದು. ಬಿಜೆಪಿ ಸರಕಾರ ಇದೆ ಎನ್ನುವ ಕಾರಣಕ್ಕೆ 302 ಪ್ರಕರಣಗಳು ಇಲ್ಲ. ಬಿಜೆಪಿಗರು ತಮ್ಮ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೆ ಒತ್ತಿ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಬೇಕು. ಪ್ರತಿ ಬೂತ್ ಕಾಯುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು, ಕೂಡಿಸುವ ರಾಜಕಾರಣದಿಂದಷ್ಟೇ ಯಶಸ್ಸು ಸಿಗುತ್ತದೆ. ದೂಡುವ ರಾಜಕಾರಣದಿಂದ ಅಲ್ಲ. ಮಹಾಭಾರತದಲ್ಲಿ ಪಾಂಡವರ ಸಂಖ್ಯೆ ಕಡಿಮೆ ಇದ್ದರೂ, ಕೌರವರಲ್ಲಿ ಬಲಶಾಲಿಗಳಿದ್ದರೂ ಗೆದ್ದಿದ್ದು ಪಾಂಡವರು. ಬಿಜೆಪಿ ಕಾರ್ಯಕರ್ತರಿಗೆ ಗೆಲುವೊಂದೇ ಮುಖ್ಯವಾಗಬೇಕು ಎಂದರು.
ಬಿಜೆಪಿಯಲ್ಲಿ ಕಾರ್ಯಕರ್ತರೇ ಮಾಲಕರು:
ಜೆಡಿಎಸ್ ಪಕ್ಷದಲ್ಲಿ ಕುಮಾರಸ್ವಾಮಿ, ದೇವೇಗೌಡರೇ ನಿರ್ಣಯ ಕೈಗೊಳ್ಳುತ್ತಾರೆ. ಕಾಂಗ್ರೆಸ್ ಸೋನಿಯಾ, ರಾಹುಲ್ ಮಾಲಕತ್ವದ ಕಂಪನಿಯಾಗಿದ್ದು, ಮಲ್ಲಿಕಾರ್ಜುನ ಖರ್ಗೆಗೆ ಹೆಚ್ಚೆಂದರೆ ಕಂಪನಿಯ ಮ್ಯಾನೇಜರ್ ಆಗಲು ಸಾಧ್ಯ. ಆದರೆ ಬಿಜೆಪಿಯಲ್ಲಿ ಕಾರ್ಯಕರ್ತರೇ ಪಕ್ಷದ ಮಾಲಕರಾಗಿದ್ದಾರೆ ಎಂದರು. ಶಾಸಕ ಸುನಿಲ್ ನಾಯ್ಕ, ಪಶ್ಚಿಮಘಟ್ಟ ಸಂರಕ್ಷಣೆ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ್, ಎನ್.ಎಸ್.ಹೆಗಡೆ, ಪ್ರಶಾಂತ ನಾಯ್ಕ, ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ ಸುಬ್ರಾಯ ದೇವಡಿಗ, ಪ್ರಧಾನ ಕಾರ್ಯದರ್ಶಿಗಳಾದ ಮೋಹನ ನಾಯ್ಕ, ಭಾಸ್ಕರ ದೈಮನೆ, ರವಿ ನಾಯ್ಕ ಜಾಲಿ, ಮುಕುಂದ ನಾಯ್ಕ, ರಾಜೇಶ ನಾಯ್ಕ, ದಿನೇಶ ನಾಯ್ಕ, ಗೋವರ್ಧನ ನಾಯ್ಕ, ಸುಬ್ರಾಯ ನಾಯ್ಕ, ಸುರೇಶ ನಾಯ್ಕ, ಶ್ರೀಕಾಂತ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.