ಕ್ರಿಮಿನಲ್‌ ಮಸೂದೆಗಳಿಗೆ ಕಾಂಗ್ರೆಸ್ ಆಕ್ಷೇಪ; ವಿಸ್ತ್ರತ ಸಮಾಲೋಚನೆಗೆ ಕರೆ

Source: Vb | By I.G. Bhatkali | Published on 14th August 2023, 4:08 AM | National News |

ಹೊಸದಿಲ್ಲಿ: ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಪುನರ್‌ರಚನೆಯ ಉದ್ದೇಶದ ಮೂರು ಮಸೂದೆಗಳ ಬಗ್ಗೆ ವ್ಯಾಪಕ ಸಮಾಲೋಚನೆಗಳು ನಡೆಯಬೇಕು ಹಾಗೂ ಇದರಲ್ಲಿ ಪರಿಣತರು ಮತ್ತು ಸಾರ್ವಜನಿಕರು ಭಾಗವಹಿಸಬೇಕು ಎಂದು ಕಾಂಗ್ರೆಸ್ ರವಿವಾರ ಕರೆ ನೀಡಿದೆ.

ಆಗಸ್ಟ್ 11ರಂದು, ಯಾವುದೇ ಪೂರ್ವ ಸೂಚನೆ ಅಥವಾ ಸಾರ್ವಜನಿಕ ಸಮಾಲೋಚನೆ ಇಲ್ಲದೆ ಮತ್ತು ಕಾನೂನು ಪರಿಣತರು, ನ್ಯಾಯ ಪರಿಣತರು, ಅಪರಾಧಶಾಸ್ತ್ರ ಪರಿಣತರು ಮತ್ತು ಸಂಬಂಧಪಟ್ಟ ಇತರರಿಂದ ಸಲಹೆಗಳನ್ನು ಸ್ವೀಕರಿಸದೆ ಮೋದಿ ಸರಕಾರವು ತನ್ನ ಕಪ್ಪು ಮ್ಯಾಜಿಕ್ ಹ್ಯಾಟ್' ನಿಂದ ಮೂರು ಮಸೂದೆಗಳನ್ನು ಮಂಡಿಸಿದೆ ಹಾಗೂ ಆ ಮೂಲಕ ದೇಶದ ಇಡೀ ಕ್ರಿಮಿನಲ್ ಕಾನೂನು ವ್ಯವಸ್ಥೆಯನ್ನು ರಹಸ್ಯವಾಗಿ, ಯಾರಿಗೂ ಗೊತ್ತಾಗದಂತೆ ಅಪಾರದರ್ಶಕವಾಗಿ ಪುನರ್‌ ರಚಿಸಲು ಪ್ರಯತ್ನಿಸಿದೆ ಎಂದು ಹೇಳಿಕೆಯೊಂದರಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ.

“ಸ್ವತಃ ಅಮಿತ್ ಶಾ ರಿಗೆ ಈ ಇಡೀ ಪ್ರಕ್ರಿಯೆಯ ಆಳದ ಬಗ್ಗೆ ಅರಿವಿಲ್ಲ ಎನ್ನುವುದುಅವರ ಪ್ರಾಸ್ತಾವಿಕ

ಭಾಷಣದಲ್ಲಿ ಗೊತ್ತಾಯಿತು, ಈ ವಿಷಯದಲ್ಲಿ ಅವರು ಅಜ್ಞಾನಿಯಾಗಿದ್ದಾರೆ ಮತ್ತು ಸಮಗ್ರ ಪ್ರಕ್ರಿಯೆ ಬಗ್ಗೆ ಅವರಲ್ಲಿ ಯಾವ ಕಲ್ಪನೆಯೂ ಇಲ್ಲ' ಎಂದು ಕಾಂಗ್ರೆಸ್ ನಾಯಕ ಹೇಳಿದರು.

“ಈ ಪ್ರಕ್ರಿಯೆಯ ಮೂಲಕ, ಅವರು ಯಶಸ್ಸಿನ ಶ್ರೇಯ ಮತ್ತು ಪ್ರಚಾರವನ್ನು ಪಡೆದುಕೊಳ್ಳಲು ಹತಾಶೆಯಿಂದ ಪ್ರಯತ್ನಿಸಬಹುದೇ ಹೊರತು, ಸಾರ್ವಜನಿಕರ ಗಮನ ಅಥವಾ ಸಂಬಂಧಪಟ್ಟವರ ಸಲಹೆಗಳು ಮತ್ತು ಪರಿಣತರ ಅಭಿಪ್ರಾಯಗಳಿಂದ ದೂರವಾಗಿ ನಡೆಸುವ ಈ ಗುಪ್ತ ಕಸರತ್ತಿನಿಂದ ದೇಶದ ಕ್ರಿಮಿನಲ್ ಕಾನೂನು ವ್ಯವಸ್ಥೆಗೆ ಸುಧಾರಣೆತರುವ ಉದ್ದೇಶ ಈಡೇರುವುದಿಲ್ಲ'' ಎಂದು ಅವರು ಅಭಿಪ್ರಾಯಪಟ್ಟರು.

ಭಾರತೀಯ ನ್ಯಾಯ ಸಂಹಿತೆ ಮಸೂದೆ-2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮಸೂದೆ- 2023 ಮತ್ತು ಭಾರತೀಯ ಸಾಕ್ಷ್ಯ ಮಸೂದೆ-2023ನ್ನು ಅಮಿತ್ ಶಾ ಲೋಕಸಭೆಯಲ್ಲಿ ಮಂಡಿಸಿದರು. ಈ ಮಸೂದೆಗಳು ಕ್ರಮವಾಗಿ ಭಾರತೀಯದಂಡ ಸಂಹಿತೆ, 1860; ಕ್ರಿಮಿನಲ್ ಪ್ರೊಸೀಜರ್ ಕಾಯ್ದೆ, 1898; ಮತ್ತು ಇಂಡಿಯನ್ ಎವಿಡೆನ್ಸ್ ಕಾಯ್ದೆ, 1872 ಇವುಗಳ ಸ್ಥಾನಗಳಲ್ಲಿ ಬರುತ್ತವೆ.

ಮಸೂದೆಗಳ ವಿಸ್ತ್ರತ ವಿಶ್ಲೇಷಣೆ ನಡೆಸಿದ ಸುರ್ಜೆವಾಲಾ, ಮಸೂದೆಗಳಲ್ಲಿ ಮಾಡಲಾಗಿರುವ ಬದಲಾವಣೆಗಳ ಬಗ್ಗೆ ಅಮಿತ್‌ ಶಾ ನೀಡಿರುವ ಹೇಳಿಕೆಗಳನ್ನು ಪ್ರಶ್ನಿಸಿದರು. ಈ ಮಸೂದೆಗಳಿಗೆ ಸಂಬಂಧಿಸಿದ ಹಲವು ವಿಷಯಗಳಲ್ಲಿ ಗೃಹ ಸಚಿವರು “ಸುಳ್ಳು ಹೇಳಿದ್ದಾರೆ ಮತ್ತು ಜನರನ್ನು ತಪ್ಪು ದಾರಿಗೆಳೆದಿದ್ದಾರೆ'' ಎಂದು ಆರೋಪಿಸಿದರು.

ಕಾಂಗ್ರೆಸ್ ಸಂಸದ ಮನೀಶ್‌ ತಿವಾರಿ ಕೂಡ ಮಸೂದೆಗಳ ಬಗ್ಗೆ ವ್ಯಾಪಕ ಸಮಾಲೋಚನೆಗಳು ನಡೆಯಬೇಕೆಂದು ಕರೆ ನೀಡಿದರು.

'ಕಾನೂನು ಮತ್ತು ವ್ಯವಸ್ಥೆಯು ರಾಜ್ಯ ವಿಷಯವಾಗಿದೆ. ಹಾಗಾಗಿ, ಕೆಲವು ಕಾಯ್ದೆಗಳು,

ಅದರಲ್ಲೂ ಮುಖ್ಯವಾಗಿ ಸಿಆರ್‌ ಪಿಸಿಗೆ ರಾಜ್ಯಗಳೂ ತಿದ್ದುಪಡಿಗಳನ್ನು ಮಾಡಿವೆ. ಈ ಪ್ರತಿಯೊಂದು ಕಾನೂನುಗಳ ಪ್ರತಿಯೊಂದು ವಿಧಿಗಳ ಬಗ್ಗೆಯೂ ಕಳೆದ 100-150 ವರ್ಷಗಳ ಅವಧಿಯಲ್ಲಿ ವ್ಯಾಪಕ ಕಾನೂನು ಪ್ರಶ್ನೆಗಳು ಎದ್ದಿವೆ. ಪ್ರತಿಯೊಂದು ವಿಧಿಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎನ್ನುವ જે ವಿಷಯದ ಕುರಿತ ಚರ್ಚೆಗಳನ್ನು ಡ್ರೈವಿ ಕೌನ್ಸಿಲ್, ಫೆಡರಲ್ ನ್ಯಾಯಾಲಯ, ಸುಪ್ರೀಂಕೋರ್ಟ್, ವಿವಿಧ ಹೈಕೋರ್ಟ್‌ಗಳು ಮತ್ತು ಕೆಲವು ಪ್ರಕರಣಗಳಲ್ಲಿ ಕೆಳ ನ್ಯಾಯಾಲಯಗಳೂ ತಮ್ಮ ತೀರ್ಪುಗಳ ಮೂಲಕ ಇತ್ಯರ್ಥ ಪಡಿಸಿವೆ'' ಎಂದು ಅವರು ಹೇಳಿದರು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...