ಭಟ್ಕಳ: ಮೀನುಗಾರಿಕೆಯಲ್ಲಿ ತೊಡಗಿರುವಾಗಲೇ ದೋಣಿಯಿಂದ ನೀರಿಗೆ ಬಿದ್ದು ಸಾವನ್ನಪ್ಪಿರುವ ತಾಲೂಕಿನ ಮಾವಿನಕುರ್ವೆ ತಲಗೋಡಿನ ನಾರಾಯಣ ಮುಕುಂದ ಖಾರ್ವಿ ಇವರ ಮನೆಗೆ ತೆರಳಿದ ಶಾಸಕ ಸುನಿಲ್ ನಾಯ್ಕ ರು.3 ಲಕ್ಷ ಮೊತ್ತದ ಪರಿಹಾರದ ಚೆಕ್ನ್ನು ಮೃತರ ಪತ್ನಿ ಮಾದೇವಿ ಖಾರ್ವಿ ಇವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಧುರೀಣರಾದ ದಾಸ ನಾಯ್ಕ, ತಿಮ್ಮಪ್ಪ ಖಾರ್ವಿ, ಶನಿಯಾರ ಮೊಗೇರ, ಶ್ರೀನಿವಾಸ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.