ಕಾರವಾರ: ಕಾರು ಡಿಕ್ಕಿ; ಬೈಕ್ ಚಾಲಕನ ಕಾಲು ತುಂಡು

Source: S O News Service | By Office Staff | Published on 19th February 2020, 9:11 PM | Coastal News |

ಕಾರವಾರ: ಕಾರು ಹಾಗೂ ಬೈಕ್ ನಡುವೆ ನಗರದ ದಿವಾಕರ ಕಾಲೇಜು ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಕೋಡಿಬಾಗ ದುರ್ಗಾದೇವಿ ದೇವಸ್ಥಾನದ ಸಮೀಪದ ನಿವಾಸಿ, ಸವಾರ ವಸಂತ ಪೊಂಡೇಕರ (65) ಅವರ ಕಾಲು ಅಪಘಾತದಲ್ಲಿ ತುಂಡಾಗಿದೆ. ಸದಾಶಿವಗಡದಿಂದ ಕಾರವಾರ ಕಡೆಗೆ ಬರುತ್ತಿದ್ದ ವೇಳೆ ಕಾರವಾರ ಕಡೆಯಿಂದ ಹಳಗಾ ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿಯಾಗಿದೆ. 
ತಕ್ಷಣ ಸ್ಥಳಕ್ಕೆ ಆಗಮಿಸಿದ ಸಂಚಾರ ಠಾಣೆಯ ಪಿಎಸ್‍ಐ ಎನ್.ಡಿ.ಜಕ್ಕಣ್ಣವರ, ಸ್ಥಳ ಪರೀಶಿಲನೆ ನಡೆಸಿದರು. ಗಾಯಗೊಂಡ ಬೈಕ್ ಸವಾರನನ್ನು ಜಿಲ್ಲಾ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಕಾರು ಚಾಲಕ, ಕೊಪ್ಪಳದಶರಣಪ್ಪ ಹುನಗುಂದ ಅವರ ವಿರುದ್ಧ ದೂರು ದಾಖಲಾಗಿದೆ. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...