ಬೈಕ್ ಗಳ ಮಧ್ಯ ಡಿಕ್ಕಿ : ಓರ್ವ ಸಾವು

Source: sonews | By Staff Correspondent | Published on 28th July 2020, 6:19 PM | Coastal News |

ಮುಂಡಗೋಡ : ಬೈಕ್‍ಗಳ ಮಧ್ಯ ಮುಖಾ ಮುಖಿ ಡಿಕ್ಕಿ ಸಂಭವಿಸಿ ಓರ್ವನು ಸ್ಥಳದಲ್ಲಿಯೇ ಓರ್ವ ಸಾವನ್ನೊಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಹುಡೇಲಕೊಪ್ಪ ಗ್ರಾಮದ ಬಳಿ ಸೋಮವಾರ ನಡೆದಿದೆ.

ಮೃತಪಟ್ಟವ ಬೈಕ್ ಸವಾರನನ್ನು ಕಾತೂರ ಗ್ರಾಮದ ರಾಘವೇಂದ್ರ ಯಲ್ಲಾಪುರ(38) ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನು  ಹಿರಹಳ್ಳಿ ಗ್ರಾಮದ  ನವೀನ ಮಟ್ಟಿಮನಿ ಹಾಗೂ ಪಾಂಡಪ್ಪ ಮಟ್ಟಿಮನಿ ಎಂದು ಹೇಳಲಾಗಿದೆ. ರಾಘವೇಂದ್ರ ಕಾತೂರನಿಂದ ಮಳಗಿ ಹೋಗುತ್ತಿದ್ದನು. ನವೀನ ಮಟ್ಟಿಮನಿ ಮಳಗಿಯಿಂದ ಹಿರಹಳ್ಳಿ ಕಡೆಗೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ ಗಾಯಾಳುಗಳನ್ನು ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್‍ಗೆ ದಾಖಲಿಸಲಾಗಿದೆ.ಈ ಕುರಿತು ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...