ಭಟ್ಕಳ:ಪಟ್ಟಣದ ರಾಜಾಂಗಣದ ಬಳಿ ನಾಗಬನದ ಕಂಪೌಡ್ ನಿರ್ಮಾಣ ವಿವಾದ ತಾರಕ್ಕಕೇರಿ ಬಿಗುವಿನ ವಾತಾವರಣ ನಿರ್ಮಾಣವಾದ ಬೆನ್ನಲ್ಲಿ ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ವರೆಗೂ ೧೪೪ಸೆ. ನಿಷೇದಾಜ್ಞೆ ಜಾರಿಗೆ ಗೊಳಿಸಿ ತಹಸೀಲ್ದಾ ಎಸ್ ರವಿಚಂದ್ರ ಆದೇಶ ನೀಡಿದ್ದಾರೆ.
ನಾಗಬನ ನಿರ್ಮಾಣದ ವಿಚಾರದಲ್ಲಿ ಶುಕ್ರವಾರ ಉಭಯ ಕೋಮುಗಳ ನಡುವೆ ವಿವಾದ ನಡೆದು ಮಾತಿನ ಚಕಮಕಿ ನಡೆದಿತ್ತು. ನಂತರ ಭಟ್ಕಳ ಉಪವಿಭಾಗಾಧಿಕಾರಿ ಮಮತಾದೇವಿ ಎಸ್ ಅವರ ಮದ್ಯಸ್ಥಿಕೆಯಲ್ಲಿ ಸಂಧಾನ ಸಭೆ ನಡೆದಿತ್ತು. ಅಲ್ಲೂ ವಾದ ವಿವಾದಗಳು ನಡೆದು ಉಭಯ ಕೋಮಿನ ಮುಖಂಡರು ಸಭೆ ಬಿಟ್ಟು ಹೊರಗೆ ಬಂದಿದ್ದರು. ಮತೀಯವಾಗಿ ಭಟ್ಕಳ ಅತಿ ಸೂಕ್ಷö್ಮ ಪ್ರದೇಶವಾಗಿದ್ದು ಸಣ್ಣ ಘಟನೆಗಳು ಕೋಮು ಗಲಭೆ ಆಗುವ ಸಾದ್ಯತೆಗಳಿರುವೆ. ಪ್ರಸ್ತುತ ನಾಗಬನದ ಬಳಿ ಮುಸ್ಲಿಂ ಸಮುದಾಯ ಬಹುಳ್ಯವಿದೆ. ಅಲ್ಲದೆ ಈ ವಿಷಯದಲ್ಲಿ ವಿವಾದವಿದೆಬೆಂದು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತೆರಳದಂತೆ ಭಟ್ಕಳ ಶಾಂತಿ ಸೌಹಾರ್ದತೆಯನ್ನು ಕಾಪಾಡಲು ನಿಷೇದಾಜ್ಞೆ ಹೊರಡಿಸಿ ಆದೇಶ ನೀಡಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಿ ನಿಷೇದಾಜ್ಞೆಯನ್ನು ಮುಂದುವರೆಸುವದಾಗಿ ಪತ್ರಿಕೆಗೆ ತಿಳಿಸಿದ್ದಾರೆ.
ಪೊಲೀಸ್ ಸುಪರ್ದಿಯಲ್ಲಿ ನಾಗಬನದ ಕಂಪೌಡ ನಿರ್ಮಾಣ ಕಾರ್ಯ ಆರಂಭ ಮುಸ್ಲಿ ಸಮುದಾಯದ ಸುಮಾರು ನೂರಕ್ಕೂ ಅಧಿಕ ಮಂದಿ ನಾಗಬನದ ಕಂಪೌಡ್ ನಿರ್ಮಾಣ ಮಾಡದಂತೆ ತಡೆ ಒಡ್ಡಿ ಶುಕ್ರವಾರ ಕಾಮಗಾರಿ ಸ್ಥಗಿತಗೊಳ್ಳುವಂತೆ ಮಾಡಿದ್ದರು. ಇದರಿಂದ ವಾದವಿವಾದ ಏರ್ಪಟ್ಟು ಕಾಮಗಾರಿ ಸ್ಥಗಿತಗೊಂಡಿತ್ತು. ಉಪವಿಭಾಗಾಧಿಕಾರಿ ಶುಕ್ರವಾರ ರಾತ್ರಿ ಪೂರಾ ತಂಜೀ ಸಂಸ್ಥೆಯವರನ್ನು ಕರೆಯಿಸಿ ಚರ್ಚೆ ನಡೆಸಿ ಧಾರ್ಮಿಕ ಕಾರ್ಯಕ್ಕೆ ಅಡ್ಡಿಪಡಿಸದಂತೆ ಮನವೊಳಿಸಿದ್ದರು. ಅದರಂತೆ ಶನಿವಾರ ನಾಗಬನದ ಕಂಪೌಡ ಕಾಮಗಾರಿ ಸಿಪಿಐ ದಿವಾಕರ ಎಸ್ ಅವರ ನೇತೃತ್ವದಲ್ಲಿ ಮತ್ತೆ ಆರಂಭಗೊಡಿತು. ಸ್ಥಳದಲ್ಲಿ ಜಿಲ್ಲೆಯ ವಿವಿದೆಡೆಯಿಂದ ಆಗಮಿಸಿದ ಸಿಪಿಐ, ಪಿಎಸ್ಐ ಸೇರಿ ನೂರಾರು ಸಂಖ್ಯೆಯ ಪೊಲೀಸ್ ಸಿಬ್ಬಂದಿಗಳು ಬೀಡು ಬಿಟ್ಟಿದ್ದಾರೆ. ತಹಸೀಲ್ದಾರ ರವಿಚಂದ್ರ ಸ್ಥಳಕ್ಕೆ ಬೇಟಿ ಕಾಮಗಾರಿ ಪರೀಶೀಲನೆ ನಡೆಸುತ್ತಿರುವದು ಕಂಡು ಬಂದಿದೆ
Read These Next
ಕಾರವಾರ: ಮಾದರಿ ನೀತಿ ಸಂಹಿತೆ ಉಲ್ಲಂಘನೆ ; ವಸ್ತುಗಳ ವಶ
ಅಬಕಾರಿ ಇಲಾಖೆ ವತಿಯಿಂದ 44.31 ಲೀ ಮದ್ಯ (ಮೌಲ್ಯ ರೂ.20,717) ವಶಪಡಿಸಿಕೊಂಡಿದ್ದು , ಇದುವರೆಗೆ ಅಬಕಾರಿ ಇಲಾಖೆ ವತಿಯಿಂದ ಒಟ್ಟು 1016 ಮತ್ತು ...
ಕಾರವಾರ: ಉಚಿತ ಕೌಶಲ್ಯ ಆಧಾರಿತ ತರಬೇತಿಗೆ ಅರ್ಜಿ ಆಹ್ವಾನ
ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ತರಬೇತಿ ಸಂಸ್ಥೆಯಲ್ಲಿ 18 ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗ ಯುವಕ ...
ಕಾರವಾರ: ಮೇ 7 ರ ವರೆಗೆ ತಾಪಮಾನ ಹೆಚ್ಚಳ: ಜಿಲ್ಲಾಧಿಕಾರಿ
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಮೇ 7 ರ ವರೆಗೆ ತಾಪಮಾನವು 33 ರಿಂದ 40 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಾಗುವ ...
ಕಾರವಾರ: ಚುನಾವಣಾ ಸಹಾಯವಾಣಿ ಕರೆ ಮತ್ತು ಸೀ ವಿಜಿಲ್ ದೂರು
ಸಾರ್ವಜನಿಕರ ಸಂದೇಹಗಳು ಮತ್ತು ದೂರುಗಳ ನಿವಾರಣೆಗೆ ಆರಂಭಿಸಿರುವ ಉಚಿತ ಸಹಾಯವಾಣಿ ಸಂಖ್ಯೆ 1950 ಗೆ ಏಪ್ರಿಲ್ 29 ರಂದು 14 ರಂದು ಕರೆಗಳನ್ನು ...
ಕಾರವಾರ: ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗೆ ಮತದಾನ ಸೌಲಭ್ಯ ಕೇಂದ್ರ
ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಚುನಾವಣಾ ಮಾರ್ಗಸೂಚಿಯನ್ವಯ ಜಿಲ್ಲಾಧಿಕಾರಿಗಳ ...
ಕಾರವಾರ: ಚುನಾವಣಾ ತರಬೇತಿಗೆ ತೆರಳಲು ಬಸ್ ವ್ಯವಸ್ಥೆ
ಲೋಕಸಭಾ ಚುನಾವಣೆ 2024ಕ್ಕೆ ಸಂಬAಧಿಸಿದAತೆ, ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪಿ.ಆರ್.ಓ, ಎ.ಪಿ.ಆರ್.ಓ, ಪಿ.ಓ-1 ಹಾಗೂ ಪಿ.ಓ-2 ...