ಭಟ್ಕಳ: ಇಲ್ಲಿನ ಕಾರ್ ಸ್ಟ್ರೀಟ್ನಲ್ಲಿರುವ ಡಾ. ಕೀರ್ತಿ ಶೆಟ್ಟಿಯವರ ಡೆಂಟಲ್ ಆಸ್ಪತ್ರೆಯನ್ನು ಚೆನ್ನಪಟ್ಟಣ ಶ್ರೀ ಹನುಮಂತ ದೇವಸ್ಥಾನದ ರಸ್ತೆಯ ಲಕ್ಷ್ಮೀ ಟಾಕೀಸ್ ಪಕ್ಕದ ಭಾಸ್ಕರ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.
ನೂತನವಾಗಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿದ ದಂತ ಚಿಕಿತ್ಸಾ ಆಸ್ಪತ್ರೆಯನ್ನು ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ ನಾಯಕ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕಟ್ಟಡದ ಮಾಲೀಕರಾದ ರಾಜೇಶ ನಾಯಕ, ಹರಿಶ್ಚಂದ್ರ ಶೆಟ್ಟಿ, ಅಜಿತ್ ಶೆಟ್ಟಿ, ಅಮಿತಾ ಕೀರ್ತಿ ಶೆಟ್ಟಿ, ನರೇಂದ್ರ ನಾಯಕ, ವೆಂಕಟೇಶ ನಾಯಕ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಕೀರ್ತಿ ಶೆಟ್ಟಿಯವರು ಕಳೆದ 19 ವರ್ಷಗಳಿಂದ ಭಟ್ಕಳದಲ್ಲಿ ದಂತ ಚಿಕಿತ್ಸೆಗೆ ಸಂಬಂಧ ಪಟ್ಟಂತೆ ಜನತೆಗೆ ಉತ್ತಮ ಸೇವೆ ನೀಡುತ್ತಿದ್ದು, ಇಂದಿನ ಬದಲಾದ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವುದು ಅಗತ್ಯವಾಗಿದೆ. ಪ್ರತಿಯೊಂದೂ ಕೂಡಾ ಸೂಕ್ಷ್ಮತೆಯಿಂದ ಕೂಡಿರುತ್ತಿದ್ದು ನಮ್ಮ ನೂತನ ದಂತ ಚಿಕಿತ್ಸಾಲಯದಲ್ಲಿ ಉತ್ತಮ ಸೇವೆ ನೀಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಜನತೆಗೆ ಹೆಚ್ಚಿನ ಸೌಲಭ್ಯವನ್ನು ವದಗಿಸುವ ಉದ್ದೇಶದಿಂದ ಸುಸಜ್ಜಿತ ಚಿಕಿತ್ಸಾಲಯವನ್ನು ತೆರೆದಿದ್ದು ಮಕ್ಕಳ ದಂತ ತಜ್ಞರು, ಇನ್ಪ್ಲಾಂಟೋಲೊಜಿಸ್ಟ್ ಸೇರಿದಂತೆ ನುರಿತ ವೈದ್ಯರ ಸೇವೆಯೂ ಕೂಡಾ ಲಭ್ಯವಾಗುವುದು ಎಂದರು.