ಯಲ್ಲಾಪುರದ ಅಬ್ದುಲ್ ವಹಾಬ್ ಮುಜಾವರ್ ನಿಧನ

Source: sonews | By Staff Correspondent | Published on 7th September 2020, 5:06 PM | Coastal News |

ಕಾರವಾರ :ಯಲ್ಲಾಪುರದ  ನಿವಾಸಿಯಾಗಿದ್ದು  ಅನೇಕ ಸಂಘ ಸಂಸ್ಥೆ ಗಳಲ್ಲಿ ತಮ್ಮನ್ನು   ತಾವು ತೊಡಗಿಸಿಕೊಂಡು  ಸಮಾಜ ಸೇವೆಯಲ್ಲಿ ನಿರತರಾಗಿರುತ್ತಿದ್ದ ಅಬ್ದುಲ್ ವಹಾಬ್ ಮುಜಾವರ್ ರವರು ಅನಾರೋಗ್ಯದ ಕಾರಣ ನಿಧನ ಹೊಂದಿದ್ದಾರೆ.   

ಅವರು ಯಲ್ಲಾಪುರ ಜಮಾತ್ ನ ಮತ್ತು  ಯಲ್ಲಾಪುರ    ತಾಲ್ಲೂಕಿನ ಅಲ್ಪಸಂಖ್ಯಾತ ಘಟಕದ  ಕಾರ್ಯದರ್ಶಿ ಯಾಗಿ  ಹಾಗೂ ನಾರ್ತ್ ಕೆನರಾ ಮುಸ್ಲಿಂ ಯುನೈಟೆಡ್ ಫೋರಂನ ತಾಲ್ಲೂಕಾ ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಇವರ ನಿಧನ ದಿಂದ ಮುಸ್ಲಿಂ ಸಮಾಜವು ಒಬ್ಬ ಹಿರಿಯ ಮಾರ್ಗದರ್ಶಕನನ್ನು ಕಳೆದು ಕೊಂಡಂತೆ ಆಗಿದೆ.  ಸಮಾಜದ  ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿದ್ದ ಇವರ ನಿಧನಕ್ಕೆ  ರಾಷ್ಟ್ರ ಮತ್ತು ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಜೀರ್ ಅಹ್ಮದ್ ಯು. ಶೇಖ್ ಹಾಗೂ ಅನೇಕ ಮುಸ್ಲಿಂ ಬಾಂಧವರು ಸಂತಾಪವನ್ನು ವ್ಯಕ್ತ ಪಡಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...