ಮಂಗಳೂರು: ಬ್ರೇಕ್ ಫೇಲ್ ಆಗಿ ಅರ್ಧ ಕಿಲೋಮೀಟರ್ ಹಿಮ್ಮುಖವಾಗಿ ಮರಳು ಲಾರಿ ಚಲಿಸಿದ ಘಟನೆ ಮಂಗಳೂರಿನ ಹೊರವಲಯದ ತಲಪಾಡಿ-ದೇವಿಪುರ ಬಳಿ ನಡೆದಿದೆ.
ಹಿಮ್ಮುಖವಾಗಿ ಬಂದು ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಅದೃಷ್ಟವಶಾತ್ ಭಾರೀ ಅವಘಡ ತಪ್ಪಿದೆ. ದೇವಿಪುರ ಶ್ರೀ ದುರ್ಗಪರಮೇಶ್ವರಿ ದೇವಸ್ಥಾನದ ಎದುರು ಈ ಘಟನೆ ಸಂಭವಿಸಿದೆ.
ಕಳೆದೆರಡು ದಿನಗಳ ಹಿಂದೆ ನಡೆದ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಲಾರಿ ಅಕ್ರಮವಾಗಿ ಕೇರಳಕ್ಕೆ ಮರಳು ಸಾಗಿಸುತಿತ್ತೆಂದು ಹೇಳಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಬಿಟ್ಟು ಕಳ್ಳ ಮಾರ್ಗದಲ್ಲಿ ಸಾಗುವ ಲಾರಿಗಳಾಗಿದ್ದು,
ಪೊಲೀಸ್ ಚೆಕ್ ಪೋಸ್ಟ್ ತಪ್ಪಿಸಲು ಕಳ್ಳ ಮಾರ್ಗ ಅನುಸರಿಸುತ್ತಿತ್ತೆಂದು ತಿಳಿದುಬಂದಿದೆ.