ಶಿರಸಿ: ಶಿರಸಿ ಕುಮಟಾ ರಸ್ತೆಯಲ್ಲಿರುವ ಹಿಪ್ನಳ್ಳಿ ಕ್ರಾಸನಲ್ಲಿ ರಸ್ತೆ ಅಪಘಾತವೊಂದು ಸಂಭವಿಸಿದ ಬಗ್ಗೆ ವರದಿಯಾಗಿದೆ. ಕಾರೊಂದು ಮಲಗಿದವರ ಮೇಲೆ ಹರಿದ ಪರಿಣಾಮವಾಗಿ ಮಗು ಸೇರಿ ಈರ್ವರ ಸ್ಥಿತಿ ಗಂಭೀರವಾಗಿದೆ.
ರಸ್ತೆ ಕೆಲಸ ಮಾಡಿ ವಿಶ್ರಾಂತಿಗಾಗಿ ಮಲಗಿದವರ ಮೇಲೆ ಕಾರು ಹರಿದ ಪರಿಣಾಮ ಈ ಭೀಕರ ಘಟನೆ ಸಂಭವಿಸಿದೆ. ಗಾಯಗೊಂಡವರೆಲ್ಲಾ ಹೈದರಬಾದನ್ ಮೆಹಬೂಬ ನಗರದ ಕಾರ್ಮಿಕರಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರಗೆ ಸಾಗಿಸಲಾಗಿದ್ದು, ಚಿಕಿತ್ಸೆ ನಡೆದಿದೆ.
ನಾಡು ಯುಗಾದಿಯ ಸಂಭ್ರಮಾಚರಣೆಯಲ್ಲಿದ್ದಾರೆ ಇಲ್ಲಿ ಒಂದು ಕುಟುಂಬದ ಹಲವರು ಜೀವನ್ಮರಣ ಸ್ಥಿತಿಯಲ್ಲಿದ್ದಾರೆ