ಮುಂದಿನ ವಾರ 4 ಬಿಜೆಪಿ ಮಂತ್ರಿಗಳು ಕಾಂಗ್ರೆಸ್ಗೆ; ಕೆಪಿಸಿಸಿ ವಕ್ತಾರ ಲಕ್ಷ್ಮಣ್
ಮಡಿಕೇರಿ: ಬಿಜೆಪಿಯ ತಲಾ ನಾಲ್ಕು ಮಂದಿ ಸಚಿವರು ಮತ್ತು ಶಾಸಕರು ಆ ಪಕ್ಷವನ್ನು ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಎಂ. ಲಕ್ಷ್ಮಣ್ ಭವಿಷ್ಯ ನುಡಿದಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 4 ಜನ ಮಂತ್ರಿಗಳು ಸೇರಿ ಒಟ್ಟು 8 ಶಾಸಕರು ಮುಂದಿನ ವಾರ ಕಾಂಗ್ರೆಸ್ ಸೇರಲಿದ್ದು, ಅವರಲ್ಲಿ ಲಿಂಗಾಯತ ಸಮುದಾಯದ ಇಬ್ಬರು ಪ್ರಮುಖ ಮಂತ್ರಿಗಳಿದ್ದಾರೆ ಎಂದು ತಿಳಿಸಿದರು.