ಭಟ್ಕಳಕ್ಕೆ ಆಗಮಿಸಿದ ಗಾಂಧಿ ಸ್ಪಬ್ಧ ಚಿತ್ರಕ್ಕೆ ತಾಲೂಕಾಡಳಿತ ಮತ್ತು ಶಿಕ್ಷಣ ಇಲಾಖೆಯಿಂದ ಸ್ವಾಗತ
ಭಟ್ಕಳ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಸಿದ್ದಪಡಿಸಿರುವ ಗಾಂಧಿಯವರ ಜೀವನ ಸಾಧನೆಯ ಗುರುತಿಸುವ ವಿನೂತನ ಗಾಂಧಿ ಸ್ತಬ್ದ ಚಿತ್ರ ವಾಹನವು ರವಿವಾರ ಭಟ್ಕಳ ತಾಲ್ಲೂಕು ಕಚೇರಿ ಆವರಣಕ್ಕೆ ಆಗಮಿಸಿದಾಗ ಉಪವಿಭಾಗಾಧಿಕಾರಿ ಸಾಜೀದ ಮುಲ್ಲಾ ಪುಷ್ಪಮಾಲೆ ಅರ್ಪಿಸುವ ಮೂಲಕ ಸ್ವಾಗತಿಸಿದರು.
ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರಭಾಕರ ಚಿಕ್ಕಮನೆ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಆರ್.ಮುಂಜಿ, ಶಿಶುಅಭಿವೃದ್ಧಿ ಯೋಜನಾಧಿಕಾರಿ ಸುಶೀಲಾ, ಅಲ್ಪಸಂಖ್ಯಾಥ ಇಲಾಖೆ ಅಧಿಕಾರಿ ಶಮ್ಸುದ್ದೀನ್,ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಾಲೆಯ ಮುಖ್ಯಾಧ್ಯಾಪಕ ಶಬ್ಬಿರ್ ದಫೇದಾರ್ ಇತರರು ಉಪಸ್ಥಿತರಿದ್ದರು.
ನಂತರ ಅಂಜುಮನ್ ಶಾಲಾ ವಿದ್ಯಾರ್ಥಿಗಳ ಹಾಗೂ ಕಾನ್ವೆಂಟ್ ವಿದ್ಯಾರ್ಥಿಗಳು ಗಾಂದಿ ಸ್ಥಬ್ಧ ಚಿತ್ರದೊಂದಿಗೆ ನಗರದ ಪ್ರಮುಖ ಸ್ಥಳಗಳಲ್ಲಿ ಮರೆವಣೆಗೆ ನಡೆಸಿ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಟ್ಟರು.