ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ 10 ವಿದ್ಯಾರ್ಥಿಗಳು ವಿಪ್ರೋ ಕಂಪನಿಗೆ ಆಯ್ಕೆಯಾಗಿದ್ದಾರೆಂದು ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಕಟಣೆ ತಿಳಿಸಿದೆ.
ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ವಿಪ್ರೋ ಕಂಪನಿಯು ಹಮ್ಮಿಕೊಂಡಿದ್ದ ಕ್ಯಾಂಪಸ್ ಸಂದರ್ಶನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶ್ರೀ ಗುರು ಸುಧೀಂದ್ರ ಬಿ.ಸಿ.ಎ ಕಾಲೇಜು ಭಟ್ಕಳ, ಸರಕಾರಿ ಕಾಲೇಜು ಕಾರವಾರ, ಎಸ್.ಡಿ.ಎಂ ಕಾಲೇಜು ಹೊನ್ನಾವರ, ಕಾಮಧೇನು ಬಿಸಿಎ ಕಾಲೇಜು ಕಾರವಾರ ಇಲ್ಲಿನ ಒಟ್ಟೂ ಹತ್ತು ವಿದ್ಯಾರ್ಥಿಗಳು ವಿಪ್ರೋ ಕಂಪನಿಯು ವೇಸ್, ವಿಮ್ಸ ಕಾರ್ಯಕ್ರಮಗಳಿಗೆ ಆಯ್ಕೆಯಾಗಿರುತ್ತಾರೆ ಎಂದೂ ತಿಳಿಸಲಾಗಿದೆ.