ಶ್ರಿನಿವಾಸಪುರ ಪಟ್ಟಣದ ಹೊರವಲೆಯದ ಕ್ರೀಡಾಂಗಣದಲ್ಲಿ ಮೇ 1 ರಂದು ಬೆಳಗ್ಗೆ 10 : 30 ಕ್ಕೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮಾಜಿ ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಂದ ಪ್ರಚಾರ ಸಭೆ ಏರ್ಪಡಿಸಲಾಗಿದೆ ಎಂದು ಜೆಡಿಎಸ್ ಮುಖಂಡ ಕೆ. ಶಿವಪ್ಪ ಹೇಳಿದರು.
ಜೆಡಿಎಸ್ ಕಛೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದವರು ಅಂದು ಬೆಳಗ್ಗೆ 10: 00 ಗಂಟೆಗೆ ಹೆಲಿಕಾಪ್ಟರ್ ನಲ್ಲಿ ಬಂದು ಪಟ್ಟಣದ ಹೊರವಲೆಯದ ರಾಜಧಾನಿ ಮಾವಿನ ಕಾಯಿ ಮಂಡಿ ಸಮೀಪ ದಿಂದ ತೆರೆದ ವಾಹನ ರೋಡ್ ಶೋ ಮೂಲಕ ಪಟ್ಟಣದ ಟಿಪ್ಪು ಸರ್ಕಲ್ ಮುಳಬಾಗಲ್ ಸರ್ಕಲ್ ಎಂ ಜಿ ರಸ್ತೆ ಮೂಲಕ ಕ್ರೀಡಾಂಗಣ ತಲುಪುವರು.ಅಲ್ಲಿ ಚುನಾವಣೆ ಪ್ರಚಾರ ಭಾಷಣ ಮಾಡಿದ ಬಳಿಕ ಸಭೆಯಲ್ಲಿ ಭಾಗವಹಿಸುವ ಮಹಿಳೆರೊಂದಿಗೆ ಸಂವಾದ ನಡೆಸುವರು ಕಾರ್ಯಕ್ರಮಕ್ಕೆ ಸುಮಾರು 50 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು
ಜೆಡಿಎಸ್ ಅಭ್ಯರ್ಥಿ ಜಿ ಕೆ ವೆಂಕಟಶಿವಾರೆಡ್ಡಿ ಸೇರಿದಂತೆ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಮುಖಂಡರು ಸಭೆಯಲ್ಲಿ ಭಾಗವಹಿಸುವರು. ಎಂದು ಹೇಳಿದರು .
ಮುಖಂಡ ಡಾ ಜಿ ವಿ ಬಿರೇಂದ್ರ ಮಾತನಾಡಿ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವಿಗೆ ಪೂರಕವಾದ ವಾತಾವರಣವಿದೆ. ಕುಮಾರಸ್ವಾಮಿ ಅವರಮನ್ನು ಮುಖ್ಯ ಮಂತ್ರಿಯಾಗಿ ಮಾಡಲು ಮತದಾರರು ಹವಣಿಸುತ್ತಿದ್ದಾರೆ.