ಭಟ್ಕಳ: ತಾಲೂಕಿನ ಮುರ್ಡೇಶ್ವರ ಜಾತ್ರಾ ಪ್ರಯುಕ್ತ ವಾಹನ ಪಾರ್ಕಿಂಗ್ ಜಾಗದಲ್ಲಿ ಲೈಟಿಂಗ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಇಲ್ಲಿನ ಮಾವಳ್ಳಿ-2 ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಪಿಡಿಓಗಳಿಗೆ ಶ್ರೀರಾಮ ಸೇನೆ ಮುರ್ಡೇಶ್ವರ ಹಾಗೂ ಇಲ್ಲಿನ ಸಾರ್ವಜನಿಕರು ಮನವಿಯನ್ನು ಸಲ್ಲಿಸಲಾಯಿತು.
ಮನವಿಯಲ್ಲಿ ಜನವರಿ 20 ರಂದು ನಡೆಯಲಿರುವ ಮಾತ್ಹೋಬಾರ ಶ್ರೀ ಮುರ್ಡೇಶ್ವರ ದೇವರ ಮಹಾ ರಥೋತ್ಸವದ ಪ್ರಯುಕ್ತ ಗ್ರಾಮ ಪಂಚಾಯತ್ ವತಿಯಿಂದ ಪಾರ್ಕಿಂಗ್ ಟೆಂಡರ್ ಕರೆದು ಶುಲ್ಕ ವಸೂಲಿ ಮಾಡಲಾಗುತ್ತದೆ. ಆದರೆ ಪ್ರವಾಸಿಗರಿಗೆ ಪಾರ್ಕಿಂಗ್ ಜಾಗದಲ್ಲಿ ಯಾವುದೇ ರೀತಿಯ ಸೌಲಭ್ಯ ಇರುವುದಿಲ್ಲ. ಈ ಕಾರಣಕ್ಕೆ ಪಾರ್ಕಿಂಗ್ ಜಾಗದಲ್ಲಿ ಪ್ರವಾಸಿಗರಿಗೆ ಅನೂಕೂಲ ಮಾಡಿಕೊಡಬೇಕು ಹಾಗೂ ಮುರ್ಡೇಶ್ವರ ಮುಖ್ಯ ರಸ್ತೆಯಲ್ಲಿ ಬಸ್ ನಿಲ್ದಾಣದ ಎದುರಿಗೆ ಮತ್ತು ಸೋನಾರಕೇರಿ ಕ್ರಾಸ್ ಬಳಿಯ ರಸ್ತೆಯ ಹೊಂಡ ಬಿದ್ದು ವಾಹನ ಸವಾರರಿಗೆ ತುಂಬಾ ಅನಾನೂಕೂಲ ಆಗುತ್ತಿದೆ. ಇದರಿಂದ ವಾಹನ ಸವಾರರು ಕೆಲವು ಬಾರಿ ಹೊಂಡ ತಪ್ಪಿಸಲು ವಿರುದ್ಧ ದಿಕ್ಕಿನಲ್ಲಿ ಬರುತ್ತಾರೆ ದೊಡ್ಡ ಅನಾಹುತ ಆಗುವುದಕ್ಕಿಂತ ಮುಂಚೆ ರಸ್ತೆಯ ಹೊಂಡವನ್ನು ಮುಚ್ಚಿ ವಾಹನ ಸವಾರರಿಗೆ ಅನೂಕೂಲ ಮಾಡಿಕೊಡಬೇಕೆಂದು ಮನವಿ ಮಾಡಲಾಯಿತು.
ಈ ಸಂಧರ್ಭದಲ್ಲಿ ಶ್ರೀ ರಾಮ ಸೇನೆ ಜಿಲ್ಲಾಧ್ಯಕ್ಷ ಜಯಂತ ನಾಯ್ಕ, ಶ್ರೀಧರ ನಾಯ್ಕ, ಉಮೇಶ ಗೊಂಡ, ಸಂತೋಷ ನಾಯ್ಕ ಮಾದೇವ ನಾಯ್ಕ ದೇವಿದಾನ ನಾಯ್ಕ ಸೇರಿದಂತೆ ಊರಿನ ನಾಗರಿಕರು ಇದ್ದರು.
Read These Next
ಮದ್ಯಾಹ್ನ ೩ ಗಂಟೆ ವೇಳೆಗೆ ಶಿರಸಿಯಲ್ಲಿ ಅತಿ ಹೆಚ್ಚು ಶೇ.೬೦ ಕಾರವಾರ ಅತಿಕಡಿಮೆ ಶೇ.೫೪ ಮತದಾನ
ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಶೇ. ೫೪.೯೭ ಮತದಾನ
ಸಾವಿಷ್ಕಾರ್ ಫೆಸ್ಟ್; ಅಂಜುಮನ್ ವಿದ್ಯಾರ್ಥಿಗಳು ಚಾಂಪಿಯನ್
ಭಟ್ಕಳ: ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಾದ ಮೊಹಮ್ಮದ್ ಇಸ್ಮಾಯಿಲ್ (4ನೇ ವರ್ಷದ ...
ಐಸಿಎಸ್ಇ ಪರೀಕ್ಷೆಯಲ್ಲಿ ವಿದ್ಯಾಂಜಲಿ ಶಾಲೆಯ ಸಾಧನೆ
ಶಾಲೆಯ ವಿದ್ಯಾರ್ಥಿಗಳಾದ ಅನುಷ್ಕಾ ನಾಗರಾಜ ದೇಶಭಂಡಾರಿ 94.80%, ಪೂರ್ಣಿಮಾ ಭೋಸಲೆ 94.60%, ಶಮಂತ್ ಕುಮಾರ ನಾಯ್ಕ 91.60%, ಅವನಿ ಶ್ರೀನಿವಾಸ ಪಡಿಯಾರ ...
ಐ.ಸಿ.ಎಸ್.ಇ ೧೦ನೇ ತರಗತಿ ಫಲಿತಾಂಶ ಪ್ರಕಟ; ನ್ಯೂ ಶಮ್ಸ್ ಸ್ಕೂಲ್ ಶೇ.೧೦೦ ಫಲಿತಾಂಶ
ಒಟ್ಟು ೮೫ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ೨೮ ವಿದ್ಯಾರ್ಥಿಗಳು ಉನ್ನತ ...
ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...
ಕಾರವಾರ: ಮದವಣಗಿತ್ತಿಯಂತೆ ಕಂಗೊಳಿಸುತ್ತಿರುವ ಜಿಲ್ಲೆಯ ಮತಗಟ್ಟೆಗಳು
ಮತದಾನದ ದಿನವನ್ನು ಹಬ್ಬದಂತೆ ಆಚರಿಸಿ ಎನ್ನುವುದು ಚುನಾವಣಾ ಆಯೋಗದ ಆಶಯ. ಅದಕ್ಕೆ ಪೂರಕವಾಗಿ ಮತಗಟ್ಟೆಗಳಲ್ಲಿ ಮತದಾರರಿಗೆ ಯಾವುದೇ ...