ಮುಂಡಗೋಡ : ದೇವರ ಪಟಗಳು ಬಿಸಿಲಿಗೆ ಗಾಳಿಗೆ ಬಿದ್ದಿರುವುದನ್ನು ಯುವಬ್ರೀಗೇಡ್ ನಿಂದ ಅವುಗಳನ್ನು ಹೆಕ್ಕಿ ತೆಗೆದು ಒಂದೂಗೂಡಿಸಿ ಅವುಗಳ ಮೇಲಿರುವ ಗಾಜು, ಕಟ್ಟು, ಹಾಗೂ ಇನ್ನಿತರ ವಸ್ತುಗಳನ್ನು ದೇವರ ಪಟಗಳಿಂದ ಬೇರ್ಪಡಿಸಿ ಒಟ್ಟುಗೂಡಿಸಿ ಡಿಪ್ಲೋಮಾ ಕಾಲೇಜ ಹತ್ತಿರ ಅರಳಿ ಸಸಿಯನ್ನು ನೆಡುವ ಸ್ಥಳದಲ್ಲಿ ಮೊದಲು ಕೇವಲ ದೇವರ ಪಟಗಳನ್ನು ಹುಗಿದು ನಂತರ ಅರಳಿಸಸಿಯನ್ನು ನಡೆವುದರ ಮೂಲಕ ಕಣ ಕಣದಲ್ಲಿ ಶಿವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಣ ಕಣದಲ್ಲಿ ದೇವರು ಇರುತ್ತಾನೆ ಎಂದು ನಂಬಿರುವ ಹಿಂದು ಧರ್ಮದ ಸಂಸ್ಕøತಿ. ಮತ್ತೇಲಿಯೂ ದೇವರು ಪಟಗಳು ಬಿದ್ದಿರುವುದನ್ನು ಕಂಡರೆ ತಕ್ಷಣ ತಮಗೆ ತಿಳಿಸುವಂತೆ ಸಾರ್ವಜನಿಕರಿಗೆ ಕೋರಿದರು
ಈ ಸಂದರ್ಭದಲ್ಲಿ ಯುವಬ್ರೀಗೆಡ್ ಕಾರ್ಯಕರ್ತರಾದ ಶ್ರೀಧರ ಉಪ್ಪಾರ, ಪವನ ಹೆಬ್ಬಾರ, ಶಶಿಧರ ಓಂಕಾರ ಹಾಗೂ ಪ್ರಕಾಶ ದೊಡ್ಮನಿ ಮುಂತಾದವರು ಈ ಕೆಲಸದಲ್ಲಿ ನಿರತರಾಗಿದ್ದರು.