ಮುಂಡಗೋಡ :ಹಾವು ಕಚ್ಚಿ ರೈತನ ಸಾವು

Source: nazir | By Arshad Koppa | Published on 24th April 2017, 8:31 AM | Coastal News |

ಮುಂಡಗೋಡ : ನಾಗರಹಾವು ಕಚ್ಚಿ ರೈತನೋರ್ವ ಮೃತಪಟ್ಟ ಘಟನೆ ತಾಲೂಕಿನ ಸಾಲಗಾಂವ ಗ್ರಾಮದಲ್ಲಿ ನಡೆದಿದೆ
ಮೃತಪಟ್ಟ ರೈತನನ್ನು ಸಾಲಗಾಂವ ಗ್ರಾಮದ ಯಲ್ಲಪ್ಪ ಗೋವಿಂದಪ್ಪ ಹಾನಗಲ್(36) ಎಂದು ತಿಳಿದುಬಂದಿದೆ.
ದನಕರಗಳಿಗೆ ಸೊಪ್ಪು ಹಾಕಲು ಸೊಪ್ಪಿನ ರಾಶಿಯಿಂದ ಸೊಪ್ಪನ್ನು ತೆಗೆದುಕೊಳ್ಳುವಾಗ ನಾಗರಹಾವು ಕಚ್ಚಿದೆ ಎಂದು ಹೇಳಲಾಗಿದ್ದು ತಕ್ಷಣ ಚಿಕಿತ್ಸೆಗೆಂದು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೇ ಹಾವು ಕಚ್ಚಿದ ದಿನವೇ ರಾತ್ರಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...