• ಮಗು ಮತ್ತು ತಾಯಿ ಇಬ್ಬರ ಸಾವು
• ಹೊನ್ನಾವರ ತಾಲೂಕು ಮಂಕಿಯಲ್ಲಿ ನಡೆದ ಘಟನೆ
ಭಟ್ಕಳ: ತನ್ನ ನಾಲ್ಕ ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಟ್ಕಳ ಸಮೀಪ ಹೊನ್ನಾವರ ತಾಲೂಕಿನ ಮಂಕಿ ಎಂಬಲ್ಲಿ ಸೋಮವಾರ ಜರಗಿದೆ.
ಬಾವಿಗೆ ಹಾರಿ ಆತ್ಮಹತ್ಯೆಗೈದ ಮಹಿಳೆಯನ್ನು ದೀಪಾ ರಾಜೇಶ್ ನಾಯ್ಕ(38) ಹಾಗೂ ಈಕೆಯ ಪುತ್ರ ಗಣೇಶ್ ರಾಜೇಶ ನಾಯ್ಕ(4) ಎಂದು ಗುರುತಿಸಲಾಗಿದೆ.
ಕುಟುಂಬ ಕಲಹ ಹಾಗೂ ಪತಿ ಮಾಡಿದ ಸಾಲವೇ ಆತ್ಮಹತ್ಯೆಗೆ ಕಾರಣವೆಂದು ಹೇಳಲಾಗುತ್ತಿದ್ದು ಸಾಲಗಾರರು ಮನೆಬಾಗಿಲಿಗೆ ಬಂದು ನಿತ್ಯವೋ ಕಿರುಕುಳ ನೀಡುತ್ತಿದ್ದ ಹಿಂಸೆಯನ್ನು ತಾಳಲಾರದೆ ಪತ್ನಿ ಆತ್ಮಹತ್ಯೆಯ ನಿರ್ಧಾರಕ್ಕೆ ಬರಲು ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.
ಘಟನೆ ಕುರಿತಂತೆ ಮಂಕಿ ಠಾಣಾ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದು ಇದುವರೆಗೆ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ತಿಳಿದುಬಂದಿದೆ.