ಕಾರವಾರ, ಮಾ ೨೩: ಇಂದು ಠಾಗೋರ ಚಿತ್ರಕಲಾ ಮಹಾವಿದ್ಯಾಲಯ ಕಾರವಾರ ಇದರ 2017 ನೇ ಸಾಲಿನ ವಿದ್ಯಾರ್ಥಿ ಕಲಾವಿಧರ ಒಟ್ಟೂ 55 ಕಲಾಕೃತಿಗಳು ಪ್ರದರ್ಶನಗೊಂಡವು. ಪ್ರದರ್ಶನವನ್ನು ಪದ್ಮಶ್ರೀ ಸುಕ್ರು ಬೊಮ್ಮು ಗೌಡಾ, ಜಾನಪದ ಕಲಾವಿದೆ ಉದ್ಘಾಟಿಸಿ, ವಿದ್ಯಾರ್ಥಿ ಕಲಾಕಾರರನ್ನು ಉದ್ದೇಶಿಸಿ ಕಲೆಯ ಜೀವನದ ಪಡಿನೆರಳು ಆದ್ದರಿಂದ ಜನರ ವಾಸ್ತವಿಕ ಜೀವನದ ಸಂಗಡ ಆದರ್ಶಮಯ ಜೀವನವನ್ನು ಅಳವಡಿಸಿಕೊಳ್ಳುವಂತಾಗಲಿ ಎಂದು ಹಾರೈಸಿದರು. ಹಾಗೂ ಕೆಲವು ಜಾನಪದ ಗೀತೆಗಳನ್ನು ಹಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿ. ಎಮ್. ಹೆಗಡೆ, ಪ್ರಾಚಾರ್ಯರು, ಸರಕಾರಿ ಪಾಲಿಟೆಕ್ನಿಕ್ ಕಾರವಾರ ಅವರು ವಿದ್ಯಾರ್ಥಿಗಳ ಕಲಾಕೃತಿಗಳನ್ನು ವೀಕ್ಷಿಸಿ, ಕಲಾಕೃತಿಗಳ ಉದ್ದೇಶವು ಜನಸಾಮಾನ್ಯರಲ್ಲಿ ಸುಲಭವಾಗಿ ತಿಳುವಳಿಕೆಯಾಗುವಂತೆ ಚಿತ್ರಿಸಲು ಸಲಹೆ ನೀಡಿದರು. ಜಾಫರ ಉಪನ್ಯಾಸಕರು, ಸರಕಾರಿ ವಿಜ್ಞಾನ ಕಾಲೇಜು, ಕಾರವಾರ ಅವರು ಮಾತನಾಡಿ ಸರಕಾರವು ಕಲಾವಿಧರನ್ನು ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡಬೇಕು. ಜಿಲ್ಲೆಯ ಏಕೈಕ ಕಲಾ ಶಾಲೆಗೆ ಶಾಸ್ವತ ಕಟ್ಟಡ ಒದಗಿಸುವಂತೆ ಸರಕಾರ ಪ್ರೋತ್ಸಾಹಿಸಬೇಕು. ಚಂದ್ರಕಾಂತ ಬಲೆಗಾರ, ನಿರುದ್ಯೋಗಿ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರು, ತರಬೇತಿ ಪಡೆದ ನಿರುದ್ಯೋಗ ಶಿಕ್ಷಕರು, ಒಕ್ಕಟ್ಟಿನಿಂದ ಉದ್ಯೋಗ ಪಡೆಯಲು ಪ್ರಯತ್ನಿಸಬೇಕು. ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಪ್ರಬಲಗೊಳಿಸಲು ಪ್ರಯತ್ನಿಸಲಾಗುವುದೆಂದು ತಿಳಿಸಿದರು. ಜಿ. ಕೆ. ಮಹಾಲೆ, ಗೌರವ ಪ್ರಾಚಾರ್ಯ, ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಕಲಾಕಾರ, ರೋಹಿತ ಆಗೇರ ಸ್ವಾಗತಿಸಿದರು. ಅಭಿಷೇಕ ನೇತ್ರೇಕರ ಕಾರ್ಯಕ್ರಮ ನಿರೂಪಿಸಿದರು. ಕೊನೆಗೆ ಸರಿತಾ ಗೌಡಾ ವಂದನಾರ್ಪಣೆ ಸಲ್ಲಿಸಿದರು.
ವಿದ್ಯಾಲಯದ ಉಪನ್ಯಾಸಕರಾದ ಜಾನಬೆಲ್, ಎಮ್. ಎಚ್. ನರಗುಂದ, ಚಂದ್ರಹಾಸ ನಾಯ್ಕ, ಎಸ್. ಎಮ್. ಚಂದಾವರಕರ ಕಚೇರಿ ಸಹಾಯಕಿ ವಿದ್ಯಾಕುಮಾರಿ ಹಾಗೂ ಸಂಸ್ಥೆಯ ಸದಸ್ಯರಾದ ವಿಜಯ ಮಹಾಲೆ, ರಮಾಕಾಂತ ಮಹಾಲೆ, ಬಿ. ಕೆ. ಮಹಾಲೆ, ಎಮ್. ಎಚ್. ಗೌಡಾ, ಸತೀಶ ಶಿರೋಡಕರ ಮತ್ತು ಇನ್ನಿತರ ಗಣ್ಯರು ಹಾಗೂ ವಿದ್ಯಾರ್ಥಿ ಕಲಾಕಾರರು ಉಪಸ್ಥಿತರಿದ್ದರು.
Read These Next
ಅಂಕೋಲದಲ್ಲಿ ಬೈಕ್ ಮತ್ತು ಟ್ರಾಕ್ಸ್ ನಡುವೆ ಅಪಘಾತ. ಸವಾರ ಸಾವು. ಇಬ್ಬರು ಗಂಭೀರ.
ಅಂಕೋಲಾ : ಬೈಕ್ ಮತ್ತು ಟ್ರಾಕ್ಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಅಕೋಲಾ ತಾಲೂಕಿನ ಹಟ್ಟಿಕೇರಿ ...
ಕಾರವಾರ ಲೋಕಸಭಾ ಚುನಾವಣೆ: ಅಂತಿಮ ಕಣದಲ್ಲಿ 13 ಅಭ್ಯರ್ಥಿಗಳು
ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬAಧಿಸಿದAತೆ , ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು ಯಾವುದೇ ಅಭ್ಯರ್ಥಿಗಳು ತಮ್ಮ ...
ಭಟ್ಕಳ: ಅರಬ್ಬಿ ಸಮುದ್ರದಲ್ಲಿ ಮುಳುಗಿ ಬಾಲಕ ಮೃತ್ಯು; ಯುವಕ ನಾಪತ್ತೆ
ಅರಬ್ಬಿ ಸಮುದ್ರದಲ್ಲಿ ಮುಳುಗಿ ಬಾಲಕನೋರ್ವ ಮೃತಪಟ್ಟಿದ್ದು, ಮತ್ತೋರ್ವ ಯುವಕ ನಾಪತ್ತೆಯಾದ ಘಟನೆ ಸೋಡಿಗದ್ದೆ ಬಳಿಯ ಹಡಿನ ಮುಲ್ಲಿ ...
ದಾಂಡೇಲಿ ನದಿಯಲ್ಲಿ ಮುಳುಗಿ ಆರು ಪ್ರವಾಸಿಗರ ದುರ್ಮರಣ
ದಾಂಡೇಲಿ : ತಾಲೂಕಿನ ಅಕೋಡಾ ಗ್ರಾಮದ ಬಿರಿಯಂಪಲ್ಲಿ ಕಾಳಿ ನದಿಯಲ್ಲಿ ಮುಳುಗಿ ಆರು ಪ್ರವಾಸಿಗರು ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ.
ಭಟ್ಕಳ ಸಮೀಪದ ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ
ಭಟ್ಕಳ : ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ಬೋಟ್ ಸಮುದ್ರದಲ್ಲಿ ಮುಳುಗಿದ ಘಟನೆ ಶನಿವಾರ ಭಟ್ಕಳ ಸಮೀಪ ನಡೆದಿದೆ. ...
ಕಾರವಾರ: ಮತದಾನ ಜಾಗೃತಿ ಜಾಥಾ
ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...