ಕಾರವಾರ: ನೆಹರೂ ಯುವ ಕೇಂದ್ರ ಕಾರವಾರ ವತಿಯಿಂದ ಮಂಗಳವಾರ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜಿಲ್ಲ ವಾರ್ತಾ ಮತ್ತು ಸಾರ್ವಜಿನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಹಿಮಂತರಾಜು ಜಿ. ಬಹುಮಾನ ವಿತರಿಸಿದರು.
ಸರ್ಕಾರಿ ಕಲಾ ಕಾಲೇಜಿನ ಶಹಾನ್ ಸಯ್ಯದ್ ಅವರು ಪ್ರಥಮ ಬಹುಮಾನ (ರೂ.5 ಸಾವಿರ ನಗದು ಹಾಗೂ ಪ್ರಶಸ್ತಿಪತ್ರ) ಪಡೆದರು. ಸರ್ಕಾರಿ ಕಲಾ ಕಾಲೇಜಿನ ಅಭಿಷೇಕ ಕಳಸ್ ದ್ವಿತೀಯ ಹಾಗೂ ಯಲ್ಲಪುರದ ಅಕ್ಷತಾ ನಾಯ್ಕ್ ಹಾಗೂ ತಂಜೀಲಾ ಎಂ.ಶೇಖ್ ಅವರು ತೃತೀಯ ಬಹುಮಾನವನ್ನು ಹಂಚಿಕೊಂಡರು.
ಬ್ಲಾಕ್ ಮಟ್ಟದಿಂದ ಆಯ್ಕೆಯಾದ 11 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ.ಕಲ್ಪನಾ ಕೆರವಡಿಕರ್, ಎನ್ಎಸ್ಎಸ್ ವಿಭಾಗದ ಮುಖ್ಯಸ್ಥ ಐ.ಕೆ.ನಾಯಕ್, ನೆಹರೂ ಯುವಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್ಪ್ರಡ್ ಡಿಸೋಜಾ ಉಪಸ್ಥಿತರಿದ್ದರು. ಉಪನ್ಯಾಸಕರಾದ ಎಸ್.ವಸ್ತ್ರದ್, ಭಾರತಿ ದೊಡ್ಡಮನಿ, ಡಾ.ಲೋಕೇಶ್ ತೀರ್ಪುಗಾರರಾಗಿದ್ದರು.