ಭಟ್ಕಳದಲ್ಲಿ ಪಿಜಿಸಿಇಟಿ ಎಂ.ಬಿ.ಎ ಪ್ರವೇಶ ಪರೀಕ್ಷೆ ಕಾರ್ಯಾಗಾರ
ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜು ಭಟ್ಕಳದಲ್ಲಿ ಜೂನ್ 26 ಮಂಗಳವಾರದಂದು ಪಿಜಿಸಿಇಟಿ ಎಂ.ಬಿ.ಎ ಪ್ರವೇಶ ಪರೀಕ್ಷೆ ತಯಾರಿ ಬಗ್ಗೆ ಒಂದು ದಿನದ ಉಚಿತ ತರಬೇತಿ ಕಾರ್ಯಾಗಾರವನ್ನು ಮಂಗಳೂರಿನ ಬೆಸೆಂಟ್ ಎಂ.ಬಿ.ಎ ಕಾಲೇಜು ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯು ಪ್ರಕರಟಣೆಯಲ್ಲಿ ತಿಳಿಸಿದೆ.
ನುರಿತ ಸಂಪನ್ಮೂಲ ವ್ಯಕ್ತಿಗಳು ನಡೆಸಲಿರುವ ಈ ಕಾರ್ಯಕ್ರಮದ ಪ್ರಯೋಜನವನ್ನು ಎಂ.ಬಿ.ಎ ಪ್ರವೇಶಾತಿ ಬಯಸುವ ಪದವೀಧರ ವಿದ್ಯಾರ್ಥಿಗಳು ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ 9845323716 ಮುಬೈಲ್ ನ್ನು ಸಂಪರ್ಕಿಸುವಂತೆ ತಿಳಿಸಿದೆ.