ಭಟ್ಕಳ: ರೋಟರಿ ಸಂಸ್ಥೆಯ ಅಂಗಸಂಸ್ಥೆ ರೋಟರಾಕ್ಟ ಕ್ಲಬ್ ಆಫ್ ಶ್ರೀ ಗುರು ಸುಧೀಂದ್ರ ಬಿಸಿಎ ಬಿಬಿಎ ಕಾಲೇಜ ಇದರ 2017-18 ನೇ ಸಾಲಿನ ಪದಗ್ರಹಣ ಸಮಾರಂಭವು ಇಂದು ಕಾಲೇಜು ಸಂಭಾಂಗಣದಲ್ಲಿ ನೆರೆವೇರಿತು. ಪದಗ್ರಹಣ ಅಧಿಕಾರಿ ಡಾ|| ಗೌರೀಶ ಪಡುಕೋಣೆಯವರು ರೋಟರಾಕ್ಟ ಕ್ಲಬ್ನ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ವಿದ್ಯಾರ್ಥಿನಿ ಕುಮಾರಿ ಸಂಪ್ರೀತಾ ಭಟ್ಟ, ಕಾರ್ಯದರ್ಶಿ ಮುಕುಂದ ನಾಯ್ಕ ಹಾಗೂ ಸಮಿತಿಯ ಇತರ ನೂತನ ಸದಸ್ಯರಿಗೆ ಅಧಿಕಾರ ಹಸ್ತಾಂತರ ಕಾರ್ಯವನ್ನು ನೆರವೇರಿಸಿದರು.
ನಿಕಟ ಪೂರ್ವ ಅಧ್ಯಕ್ಷ ಕುಮಾರ ತಿಲಕ ನಾಯ್ಕ 2016-17ನೇ ಸಾಲಿನ ವರದಿಯನ್ನು ವಾಚಿಸಿದರು. ನೂತನ ಅಧ್ಯಕ್ಷೆ ಮಾತನಾಡಿ ಸಂಸ್ಥೆಯು ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮದ ಸಂಕ್ಷಿಪ್ತ ವಿವರವನ್ನು ನೀಡಿದರು. ಕಾರ್ಯಕ್ರಮದಲ್ಲಿ ರೋಟರಿ ಪ್ರಮುಖರಾದ ನಝೀರ ಕಾಶಿಂಜಿ, ಜಲಾಲುದ್ದೀನ್ ಕಾಸರಕೋಡ, ಜಿಶಾನ ಅಹಮದ, ಶ್ರೀನಿವಾಸ ಪಡಿಯಾರ, ರವಿ ನಂಬಿಯಾರ, ಪ್ರಾಂಶುಪಾಲ ನಾಗೇಶ ಭಟ್, ಉಪ ಪ್ರಾಂಶುಪಾಲ ಶ್ರೀನಾಥ ಪೈ, ಬೋಧಕ-ಬೋಧಕೇತರ ಸಿಬ್ಬಂದಿಗಳು, ರೋಟರಾಕ್ಟ ಸದಸ್ಯರು ಹಾಜರಿದ್ದರು. ರೋಟರಿ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಅಧ್ಯಕ್ಷೀಯ ಭಾಷಣವನ್ನು ಮಾಡಿದರು, ಸದಸ್ಯೆ ರಾಜೇಶ್ವರಿ ವಂದಿಸಿದರು. ರೋಟರಿ ಸದಸ್ಯರಾದ ರಾಜೇಶ ನಾಯಕ ಕಾರ್ಯಕ್ರಮವನ್ನು ನಿರೂಪಿಸಿದರು.