ಯಲ್ಲಾಪುರ : ಅರಬೈಲ್ ಘಾಟ ರಾಷ್ಟ್ರೀಹೆದ್ದಾರಿ ಭೀಕರ ಅಪಘಾತ ೯ ಜನರ ದುರ್ಮರಣ
ಯಲ್ಲಾಪುರ : ಯಲ್ಲಾಪುರ ತಾಲೂಕಿನ ಅರಬೈಲ್ ಘಾಟನಲ್ಲಿ ಮಹೀಂದ್ರಾ ಝೈಲೊ ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಭೀಕರ ಅಪಘಾತ ಸಂಭವಿಸಿ ೯ ಜನರು ಮೃತಪಟ್ಟ ಘಟನೆ ನಡೆದಿದೆ.
ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ ೬೩ ರಲ್ಲಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ೯ ಜನ ಅಸುನೀಗಿದ್ದಾರೆ. ಮೃತರೆಲ್ಲಾ ಬೆಳಗಾವಿ ಜಿಲ್ಲೆ ಕುಡಚಿ ಕ್ಷೇತ್ರದ ಮಾಜಿ ಶಾಸಕ ಶ್ಯಾಮರಾಮ ಘಾಟಗೆ ಸಹೋದರ ಸಂಬಂದಿಗಳಾಗಿದ್ದಾರೆ ಎಂದು ಹೇಳಲಾಗಿದೆ.
ಮೃತರೆಲ್ಲರೂ ಕುಕ್ಕೆ ಸುಬ್ರಹ್ಮಣ್ಯೆ ಕ್ಷೇತ್ರಕ್ಕೆ ತೆರಳಿ ಹಿಂದುರುಗುವಾಗ ಯಲ್ಲಾಪುರ ಕಡೆಯಿಂದ ಲಾರಿ ಮಧ್ಯ ಈ ಘಟನೆ ಸಂಭಿಸಿದೆ ಎನ್ನಲಾಗಿದೆ.
ಮೃತರಲ್ಲಿ ವಿವೇಕ ಘಾಟಗೆ, ಸಾಗರ ಚಾಲಕ ಮುಜ್ಜು ಮುಲ್ಲಾ ಎಂದು ತಿಳಿದು ಬಂದಿದೆ ಮೃತರಲ್ಲಿ ಮೂರು ಮಕ್ಕಳು ಹಾಗೂ ಮೂರು ಮಹಿಳೆಯರು ಸೇರಿದ್ದಾರೆ ಎಂದು ತಿಳಿದುಬಂದಿದೆ ಈ ಕುರಿತು ಯಲ್ಲಾಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದುಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ