ಅಂಕೋಲಾ : ಕುಗ್ರಾಮಗಳ ಜನರು ಅನಾರೋಗ್ಯಕ್ಕೀಡಾದಾಗ ಜೋಲಿಯ ಮೂಲಕ ಹೊತ್ತು ಆಸ್ಪತ್ರೆಗೆ ಸಾಗಿಸುವ ಸನ್ನಿವೇಶ ಇಂದಿಗೂ ಕಾಣಿಸುತ್ತಲೆ ಇದೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ವೈಲಬೇಣ ಗ್ರಾಮದ ವೃದ್ಧರೋರ್ವರನ್ನ ಕಾಡಿನಲ್ಲಿ ಹೊತ್ತು ತಂದ ಘಟನೆ ನಡೆದಿದೆ.
70 ವರ್ಷದ ನೂರಾ ಪೊಕ್ಕ ಗೌಡ ಎಂಬುವವರು ಬುಧವಾರ ಪಾರ್ಶ್ವವಾಯು ಗೆ ಒಳಗಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನ ಆಸ್ಪತ್ರೆಗೆ ಸಾಗಿಸಬೇಕಾಗಿತ್ತು. ಗ್ರಾಮಕ್ಕೆ ಸಮರ್ಪಕ ರಸ್ತೆ ಸೌಕರ್ಯ ಇಲ್ಲದೇ ಇರೋದ್ರಿಂದ ವಾಹನ ಕೂಡ ಬರುತ್ತಿಲ್ಲಿ ಹೀಗಾಗಿ ಜೋಲಿ ಕಟ್ಟಿಕೊಂಡು ಮನೆಯವರು ಕರೆ ತಂದಿದ್ದಾರೆ. ಮಂಗಳೂರಿಗೆ ಕರೆದೊಯ್ಯಬೇಕಾಗಿತ್ತು. ಆದ್ರೆ ರಸ್ತೆ ಸಂಪರ್ಕ ಇಲ್ಲದೆ ಇರೋದ್ರಿಂದ ಕುಟುಂಬದವರು ಅವರನ್ನ ಜೋಲಿಯ ಮೂಲಕ ಹೊತ್ತು ಹೆದ್ದಾರಿಗೆ ತರಲಾಯಿತು. ಬಳಿಕ ಖಾಸಗಿ ವಾಹನದಲ್ಲಿ ಮಂಗಳೂರು ಆಸ್ಪತ್ರೆಗೆ ಒಯ್ಯಲಾಯಿತು.
ಉತ್ತರಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿಯ ಪರದಾಟಕ್ಕೆ ಯಾವಾಗ ಕೊನೆಯಾಗುತ್ತೊ. ಆಳುವವರು ಈ ಬಗ್ಗೆ ಗಮನ ಹರಿಸಬೇಕಾಗಿದೆ.