ಧಾರವಾಡ: ಶಿಕ್ಷಣದಲ್ಲಿ ಎಲ್ಲಾ ಸಾಧನೆಗಳಿಗೆ ಎಸ್ ಎಸ್ ಎಲ್ ಸಿ ಹಂತವು ಪ್ರಮುಖ ಮೈಲಿಗಲ್ಲಾಗಿದೆ. ವಿದ್ಯಾರ್ಥಿಗಳು ಈ ಹಂತದಲ್ಲಿ ಯಾವುದೇ ಭಯಪಡದೇ , ಇಡೀ ವರ್ಷ ವಿದ್ಯಾಭ್ಯಾಸ ಸಮರ್ಥವಾಗಿ ನಿರ್ವಹಿಸಿದಾಗ ಯಶಸ್ಸುಗಳಿಸಬಹುದು.ಎಲ್ಲಾ ವಿದ್ಯಾರ್ಥಿಗಳಲ್ಲಿಯೂ ಪ್ರತಿಭೆ ಇದ್ದೇ ಇರುತ್ತದೆ.ಅದನ್ನು ಗುರುತಿಸಿ, ಪೆÇೀಷಿಸುವ ಹೊಣೆ ಶಿಕ್ಷಕರು ಮತ್ತು ಪಾಲಕರ ಮೇಲಿರುತ್ತದೆ.ವಿದ್ಯಾರ್ಥಿಗಳು ಕೂಡ ತಮ್ಮ ಜವಾಬ್ದಾರಿ ಸಮರ್ಪಕವಾಗಿ ನಿರ್ವಹಿಸಿದಾಗ ಉತ್ತಮ ಅಂಕ ಗಳಿಸಿ,ಉತ್ತೀರ್ಣರಾಗಲು ಸಾಧ್ಯ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ನಗರದ ಜೆಎಸ್ ಎಸ್ ಕಾಲೇಜಿನ ಉತ್ಸವ ಸಭಾಂಗಣದಲ್ಲಿಂದು, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ,ರಾಣೆಬೆನ್ನೂರಿನ ನಂದೀಶ್ವರ ನೈಪುಣ್ಯ ಕೌಶಲ್ಯ ಸಂಸ್ಥೆ ಸಹಯೋಗದಲ್ಲಿ 2019-20 ನೇ ಸಾಲಿನ 10 ನೇ ತರಗತಿ ಮಕ್ಕಳಿಗೆ ಪರೀಕ್ಷಾ ಫಲಿತಾಂಶ ಮತ್ತು ಮನೋಬಲ ಹೆಚ್ಚಿಸುವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲಾ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಪಾಸಾಗಲು ಸಾಧ್ಯವಿಲ್ಲದಿದ್ದರೂ, ಕನಿಷ್ಠ ಅಂಕಗಳಿಸಿ ಎಸ್ ಎಸ್ ಎಲ್ ಸಿ ಉತ್ತೀರ್ಣರಾದಾಗ ಮಾತ್ರ ಮುಂದೆ ತಮ್ಮ ಆಸಕ್ತಿಗನುಗುಣವಾಗಿ ಕಲೆಗಾರ,ಕ್ರೀಡಾಪಟು, ಸಂಗೀತಗಾರ ಏನಾದರೂ ಆಗಬಹುದು. ಎಲ್ಲದಕ್ಕೂ ಎಸ್ ಎಸ್ ಎಲ್ ಸಿ ಪಾಸಾಗುವುದು ಅತಿ ಮುಖ್ಯ . ನಗರ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಮಾನ ಪೆÇ್ರೀತ್ಸಾಹ ,ಅವಕಾಶ,ತರಬೇತಿ ನೀಡಲಾಗುತ್ತಿದೆ.ಎಲ್ಲಾ ವಿದ್ಯಾರ್ಥಿಗಳು ತರಬೇತಿಯ ಪ್ರಯೋಜನ ಪಡೆದು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹಾರೈಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ವಿದ್ಯಾರ್ಥಿಗಳು ತಮಗೆ ಕಠಿಣ ಎನ್ನಿಸುವ ವಿಷಯಗಳನ್ನು ಹೆಚ್ಚು ಒತ್ತು ನೀಡಿ ಅಭ್ಯಸಿಸಿ ಪಠ್ಯ ಅರ್ಥಮಾಡಿಕೊಳ್ಳಬೇಕು.ಪಾಲಕರು ಮಕ್ಕಳ ಮೇಲೆ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ.ಅವರ ನಿರೀಕ್ಷೆಗಳನ್ನು ಹುಸಿ ಮಾಡಬೇಡಿ.ಗ್ರಾಮೀಣ ಪ್ರದೇಶಕ್ಕೆ ಹೋಲಿಸಿದರೆ,ನಗರ ಪ್ರದೇಶಗಳಲ್ಲಿ ಫಲಿತಾಂಶ ಕಡಿಮೆ ಪ್ರಮಾಣದಲ್ಲಿ ದಾಖಲಾಗುತ್ತಿದೆ.ಇನ್ನೂ ಮೂರು ತಿಂಗಳು ನಿಮ್ಮ ಸಾಮಥ್ರ್ಯ ಸುಧಾರಿಸಿಕೊಳ್ಳಲು ಇಂದಿನಿಂದಲೇ ಪ್ರಯತ್ನಿಸಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಜಾನನ ಮನ್ನಿಕೇರಿ,ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ, ನಂದೀಶ ಶೆಟ್ಟರ್, ಮಹಾವೀರ ಉಪಾಧ್ಯೆ, ಶಿಕ್ಷಣಾಧಿಕಾರಿ ಎಸ್.ಎಂ.ಹುಗ್ಗಿ, ವಿನಾಯಕ ಜೋಷಿ,ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಮಂಜುನಾಥ ಅಡವೇರ ಮತ್ತಿತರರು ವೇದಿಕೆಯಲ್ಲಿ ಇದ್ದರು. ರಾಜೇಶ್ವರಿ ಶೆಟ್ಟರ್ ಕಾರ್ಯಕ್ರಮ ನಿರೂಪಿಸಿದರು.