ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಖಂಡಿತ ಜಾರಿಗೆ ತರುತ್ತೇವೆ : ಗೃಹ ಸಚಿವ ಬೊಮ್ಮಾಯಿ.
ಕಾರವಾರ : ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಖಂಡಿತವಾಗಿ ಜಾರಿಗೆ ತರುತ್ತೇವೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ವಿಷಯ ತಿಳಿಸಿದ್ದಾರೆ.
ಕಳೆದ ಬಾರೀ ನಾವು ಈ ಕಾನೂನು ತಂದಿದ್ದೇವು. ಆದರೆ ಆಗ ಅದನ್ನ ಗರ್ವನರ್ ರಿಜೆಕ್ಟ್ ಮಾಡಿದ್ದರು. ಈಗ ಇನ್ನಷ್ಟು ಪೂರಕ ವಿಷಯಗಳನ್ನ ಸೇರಿಸಿ ಗೋ ಹತ್ಯೆ ಕಾನೂನು ತರಲು ತೀರ್ಮಾನ ಮಾಡಿದ್ದೇವೆ. ಪಶು ಸಂಗೋಪನಾ ಇಲಾಖೆಯಿಂದ ಈಗಾಗಲೇ ಸಿದ್ದತೆ ಮಾಡಿಕೊಳ್ಳಲಾಗಿದೆ. ಗೋಹತ್ಯೆ ಕಾನೂನು ಇದ್ದರೂ ಸಹ ಗೋ ಕಳ್ಳ ಸಾಗಾಣೆ ಮಾಡುವ ದಂಧೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಲೆ ಇದೆ ಎಂದು ಕಳವಳ ವ್ಯಕ್ತಪಡಿಸಿದ ಅವರು,
ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ
ಎಲ್ಲಾ ಜಿಲ್ಲೆಗಳಲ್ಲೂ ಗೋ ಸಾಗಾಟ ನಿಯಂತ್ರಣ ಸಂಬಂಧದ ಸಮಿತಿ ಇದೆ. ಆ ಸಮಿತಿಯನ್ನ ಪುನಾರಚನೆ ಮಾಡಿ ಕಾನೂನನ್ನ ಅನುಷ್ಠಾನಕ್ಕೆ ತರುತ್ತೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಮತಾಂತರ ನಿಯಂತ್ರಣ ವಿಚಾರ ಅತ್ಯಂತ ಮಹತ್ವದ್ದಾಗಿದೆ. ಹಿಂದೆ ವರದಕ್ಷಿಣಿ ಇತ್ತು. ಕಾನೂನು ಇರಲಿಲ್ಲ. ವರದಕ್ಷಿಣಿ ನಿಷೇಧ ಕಾನೂನು ಜಾರಿಗೆ ತರಲಾಗಿತ್ತು. ಅದೇ ರೀತಿ ಮತಾಂತರಕ್ಕೆ ಪ್ರಚೋದನೆ ಮಾಡಲು ದಾರಿಯಾಗಿದೆ. ಮತಾಂತರ ನಿಯಂತ್ರಣ ಸಂಬಂಧ ಕಾನೂನು ತರಲಿದ್ದೇವೆ ಎಂದು ಅವರು ಹೇಳಿದರು