ಭಟ್ಕಳ: ಬುಲೆರೊ ವಾಹನದಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ನಾಲ್ವರನ್ನು ನಗರಠಾಣೆ ಪೊಲೀಸರು ಬಂಧಿಸಿ, ವಶಕ್ಕೆ ಪಡೆದ ಘಟನೆ ಪಟ್ಟಣದ ಕೋಕ್ತಿ ನಗರದಲ್ಲಿ ಭಾನುವಾರ ನಡೆದಿದೆ.
ಮುಸಾಧಿಕ್, ಸವೂದ್, ಸದ್ದಾಂ ಹುಸೇನ್, ಮುಸ್ತಾಫ ಬಂಧಿತರು. ಇವರು ಜಾನುವಾರುಗಳನ್ನು ಕೋಕ್ತಿನಗರಕ್ಕೆ ತರುವಾಗ ನಗರಠಾಣೆಯ ಪೊಲೀಸರು ಆರೋಪಿ ಸಮೇತ ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ವಾಹನದಲ್ಲಿ 1.50ಲಕ್ಷರೂ ಮೌಲ್ಯದ ಅಕ್ಕಿ ಮೂಟೆ, 60ಸಾವಿರ ರೂ ಮೌಲ್ಯದ ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ನಗರ ಠಾಣೆ ಪಿ.ಎಸ್.ಐ ಭರತ ನಾಯಕ ತನಿಖೆ ನಡೆಸುತ್ತಿದ್ದಾರೆ.