ಕಾರವಾರ: ಜಮೀನಿನ ಪೊಡಿ ಪ್ರಕರಣದಲ್ಲಿ ಲಂಚ ಪಡೆಯುತ್ತಿದ್ದ ತಾಲೂಕಿನ ತತ್ವಣಗಿ ಗ್ರಾಮ ಲೆಕ್ಕಾಧಿಕಾರಿ (ಶಾನಭೋಗ್) ಗಿರೀಶ ರಣದೇವ ನನ್ನು ಕಾರವಾರದ ಎಸಿಬಿ ಅಧಿಕಾರಿಗಳು ಲಂಚದ ಹಣದ ಸಮೇತವಾಗಿ ವಶಕ್ಕೆ ಪಡೆದಿದ್ದಾರೆ.
ಹಳಿಯಾಳದ ತತ್ವಣಗಿ ಗ್ರಾಮದ ಭೀಮರಾವ್ ರಾಯಪ್ಪಾ ಕುರುಬರ ಎನ್ನುವವರು ಜಮೀನಿನ ಪೊಡಿ ಮಾಡಿಸುವ ಸಲವಾಗಿ ಗ್ರಾಮ ಲೆಕ್ಕಿಗ ಗಿರೀಶ ಹತ್ತಿರ ತೆರಳಿದ್ದು ಅವರು ೫೦೦೦ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ರೈತ ಭೀಮರಾವ್ ಎಸಿಬಿ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ ಹಿನ್ನೆಲೆಯಲ್ಲಿ ಇಂದು ಮಧ್ಯಾನ ಎಸಿಬಿ ಡಿವೈ ಎಸ್ ಪಿ ಗಿರೀಶ್ ನೇತ್ರತ್ವದ ಅಧಿಕಾರಿಗಳ ತಂಡವು ದಾಳಿ ನಡೆಸಿ ಗ್ರಾಮ ಲೆಕ್ಕಾಧಿಕಾರಿ ಗಿರೀಶ್ ಹಣ ಪಡೆಯುವಾಗ ದಾಳಿ ನಡೆಸಿ ವಶಕ್ಕೆ ಪಡೆದಿದ್ದು ಕಾರವಾರ ಎಸಿಬಿ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ