ಆದಿತ್ಯನಾಥ್ ಕ್ಷೇತ್ರ ಗೋರಖ್ ಪುರದಲ್ಲಿ ಬಿಜೆಪಿಗೆ ಸೋಲು
ಲಕ್ನೋ: ಉತ್ತರ ಪ್ರದೇಶದ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲೂ ಎಸ್ಪಿ ಭರ್ಜರಿ ಜಯ ಗಳಿಸಿದೆ. ಅದರಲ್ಲೂ ಗೋರಖ್ ಪುರ ಮುಖ್ಯಮಂತ್ರಿ ಆದಿತ್ಯನಾಥ್ ರ ಸ್ವಕ್ಷೇತ್ರವಾಗಿದ್ದು, ಇಲ್ಲಿನ ಸೋಲಿನಿಂದ ಬಿಜೆಪಿಗೆ ಭಾರೀ ಮುಖಭಂಗವಾಗಿದೆ.
ಇಂದು ಬೆಳಗ್ಗೆಯೇ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು, ಮೊದಲಿಗೆ ಗೋರಖ್ ಪುರದಲ್ಲಿ ಬಿಜೆಪಿ ಮತ್ತು ಫುಲ್ಪುರದಲ್ಲಿ ಎಸ್ಪಿ ಮುನ್ನಡೆ ಕಾಯ್ದುಕೊಂಡಿತ್ತು. ಆನಂತರ ಎರಡೂ ಕ್ಷೇತ್ರಗಳಲ್ಲೂ ಎಸ್ಪಿ ಮುನ್ನಡೆ ಸಾಧಿಸಿತ್ತು.
ಇದೀಗ ಗೋರಖ್ ಪುರದ ಫಲಿತಾಂಶ ಪ್ರಕಟಗೊಂಡಿದ್ದು, ಗೋರಖ್ ಪುರದಲ್ಲಿ ಎಸ್ಪಿಯ ಪ್ರವೀಣ್ ಕುಮಾರ್ ನಿಶಾದ್ 21,961 ಮತಗಳ ಅಂತರದಲ್ಲಿ ಬಿಜೆಪಿಯ ಉಪೇಂದ್ರ ದತ್ ಶುಕ್ಲಾರನ್ನು ಮಣಿಸಿದ್ದಾರೆ. ಫುಲ್ಪುರದಲ್ಲಿ ಸಮಾಜವಾದಿ ಪಕ್ಷದ ನಾಗೇಂದ್ರ ಪ್ರತಾಪ್ ಸಿಂಗ್ ಪಟೇಲ್ ಬಿಜೆಪಿ ಅಭ್ಯರ್ಥಿಯನ್ನು 59,613 ಮತಗಳ ಅಂತರದಲ್ಲಿ ಮಣಿಸಿದ್ದಾರೆ.