ಲಕ್ಟೋ: ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಗೆ ಕೆಲವೇ ದಿನಗಳು ಬಾಕಿ ಇರುವಾಗ ಇಬ್ಬರು ಮಾಜಿ ಸಚಿವರು ಸೇರಿದಂತೆ ಹಲವು ಬಿಜೆಪಿ ಹಾಗೂ ಬಿಎಸ್ಪಿ ನಾಯಕರು ಶುಕ್ರವಾರ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ ಯಾಗಿದ್ದಾರೆ.
ಉತ್ತರ ಪ್ರದೇಶದ ಮಾಜಿ ಸಚಿವರಾದ ಸ್ವಾಮಿ ಪ್ರಸಾದ್ ಮೌರ್ಯ ಹಾಗೂ ಧರಂ ಸಿಂಗ್ ಸೈನಿ ಅವರು ಲದಲ್ಲಿ ಶುಕ್ರವಾರ ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ. ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇತ್ತೀಚೆಗೆ ಬಿಜೆಪಿ ತ್ಯಜಿಸಿದ್ದ ಐವರು ಶಾಸಕರಾದ ಬ್ರಿಜೇಶ್ ಪ್ರಜಾಪತಿ, ಭಗವತಿ ಸಾಗರ್, ರೋಶನ್ಲಾಲ್ ವರ್ಮಾ, ಮುಖೇಶ್ ವರ್ಮಾ ಹಾಗೂ ವಿನಯ ಶಾಕ್ಯ ಅವರು ಕೂಡ ಲಕ್ಟೋದಲ್ಲಿ ನಡೆದ ವರ್ಚುವಲ್ ಕ್ಯಾಲಿಯಲ್ಲಿ ಸಮಾಜವಾದಿ ಪಕ್ಷ ಸೇರಿದ್ದಾರೆ.
ಅಪ್ನಾ ದಳದ ಶಾಸಕ ಚೌಧರಿ ಅಮರ್ ಸಿಂಗ್, ಬಹುಜನ ಸಮಾಜ ಪಕ್ಷದ ನಾಯಕರಾದ ನೀರಜ್ ಕುಶ್ವಾಹ ಮೌರ್ಯ ಹಾಗೂ ಬಲರಾಮ್ ಸೈನಿ, ಬಿಜೆಪಿ ನಾಯಕರಾದ ಹರ್ಪಾಲ್ ಸೈನಿ ಹಾಗೂ ರಾಜೇಂದ್ರ ಪ್ರತಾಪ್ ಸಿಂಗ್, ಕಾಂಗ್ರೆಸ್ ನಾಯಕ ಬನ್ನಿ ಸಿಂಗ್ ಪಹಾಡಿಯ, ಮಾಜಿ ಸಹಾಯಕ ಸಚಿವ ವಿದ್ರೋಹಿ ಮೌರ್ಯ ಹಾಗೂ ಮಾಜಿ ಮುಖ್ಯ ಭದ್ರತಾ ಅಧಿಕಾರಿ ಪದಂ ಸಿಂಗ್ ಕೂಡ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕಕ್ಕೆ ಸೇರ್ಪಡೆಯಾಗಿದ್ದಾರೆ.
ಆದಿತ್ಯನಾಥ್ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿದ್ದ ಮೌರ್ಯ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದು ಬಿಜೆಪಿಗೆ ಆಘಾತ ಉಂಟು ಮಾಡಿತ್ತು. ಅವ ರು ರಾಜೀನಾಮೆ ನೀಡಿದ ಮೂರು ದಿನಗಳಲ್ಲಿ 10ಕ್ಕೂ ಅಧಿಕ ನಾಯಕರು ಬಿಜೆಪಿ ತ್ಯಜಿಸಿದ್ದಾರೆ. ಈ ಪಟ್ಟಿಯಲ್ಲಿ ಸಚಿವರಾದ ಧರಂ ಸಿಂಗ್ ಸೈನಿ ಹಾಗೂ ದಾರಾ ಸಿಂಗ್ ಚೌಹಾಣ್ ಕೂಡ ಸೇರಿದ್ದಾರೆ. ಬಿಜೆಪಿಯನ್ನು ನಿರ್ಮೂಲನೆ ಮಾಡಬೇಕು ಹಾಗೂ ಉತ್ತರಪ್ರದೇಶವನ್ನು ದೌರ್ಜನ್ಯ ಮುಕ್ತಗೊಳಿಸಬೇಕು ಎಂದು ಮೌರ್ಯ ಅವರು ಶುಕ್ರವಾರ ಹೇಳಿದ್ದಾರೆ
“ಇಂದು ಬಿಜೆಪಿಯ ಅಂತ್ಯಕ್ಕೆ ಶಂಖ ಮೊಳಗಿದೆ. ದೇಶ ಹಾಗೂ ರಾಜ್ಯದಲ್ಲಿ ಜನರನ್ನು ದಾರಿತಪ್ಪಿಸುವ ಮೂಲಕ ಬಿಜೆಪಿ ಜನರನ್ನು ವಂಚಿಸಿದೆ ಹಾಗೂ ಶೋಷಣೆ ಮಾಡಿದೆ' ಎಂದು ಅವರು ಹೇಳಿದ್ದಾರೆ.