ಕಲಬುರ್ಗಿ : ಜಿಲ್ಲೆಯಲ್ಲಿ ಬಾರೀ ಮಳೆಗೆ ಹಲವು ಗ್ರಾಮಗಳ ಜನರು ತತ್ತರಿಸಿದ್ದಾರೆ.
ಪ್ರವಾಹದಿಂದ ಹಲವು ಜನರು ನೀರಿನಲ್ಲಿ ತೇಲಿ ಹೋಗಿದ್ದು ತಮ್ಮ ಪ್ರಾಣ ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ವೃದ್ದೆಯೊಬ್ಬರು ತಮಗೆ ಹೊಸ ಮನೆ ನಿರ್ಮಿಸಿಕೊಡಬೇಕೆಂದು ತಮ್ಮ ಮನೆಯ ಮಹಡಿ ಏರಿ ಪ್ರತಿಭಟನೆ ನಡೆಸಿದ್ದಾರೆ.
ಕಲಬುರ್ಗಿ ಜಿಲ್ಲೆಯ ಫಿರೋಜಾಬಾದ್ ಗ್ರಾಮದ ಕಮಲಮ್ಮ ಎಂಬಾಕೆಯೆ ಸೂರಿಗಾಗಿ ಆಗ್ರಹಿಸಿ ತಮ್ಮ ಹಳೆಯ ಮನೆ ಮೇಲ್ಭಾವಣಿ ಮೇಲೇರಿ ಪ್ರತಿಭಟಿಸಿದ್ದಾರೆ. ಬಾರೀ ಮಳೆ ಹಾಗೂ ಭೀಮಾ ನದಿ ಪ್ರವಾಹಕ್ಕೆ ನನ್ನ ಮನೆ ಹಾಳಾಗಿದ್ದು, ವಾಸ್ತವ್ಯಕ್ಕೆ ಯೋಗ್ಯವಾಗಿಲ್ಲ. ಹೀಗಾಗಿ ಸರ್ಕಾರ ಹಾಗೂ ಸ್ಥಳೀಯ ಆಡಳಿತ ನನಗೆ ಹೊಸ ಮನೆ ಕಟ್ಟಿಸಿಕೊಡಬೇಕೆಂದು ವೃದ್ಧೆ ಗೋಗರೆದಿದ್ದಾಳೆ.
ಶುಕ್ರವಾರ ರಾಜ್ಯ ಕಂದಾಯ ಸಚಿವ ಆರ್.ಅಶೋಕ್ ಪ್ರವಾಹ ಪರಿಶೀಲನೆಗೆ ಆಗಮಿಸಿದ್ದು, ಈ ವೇಳೆಯೂ ಅಜ್ಜಿ ಮನೆ ಮೇಲೆ ಕುಳಿತಿದ್ದಾರೆ. ಆದರೆ ಸಚಿವರು ಅಜ್ಜಿ ವ್ಯಥೆ ఆలిಸದೇ ಮುಂದೆ ನಡೆದಿದ್ದಾರೆ.
ಈ ಅಜ್ಜಿ ಮಳೆ ಹಾಗೂ ನಡುಗುವ ಚಳಿಯಲ್ಲಿ ಕಳೆದ ಮೂರು ದಿನದಿಂದ ಮನೆಯ ಮೇಲೇರಿ ಪ್ರತಿಭಟನೆ ನಡೆಸುತ್ತಿದ್ದು, ಅಸ್ವಸ್ಥರಾಗಿರುವ ಸಾಧ್ಯತೆ ಇದ್ದರೆ ಕೆಳಕ್ಕೆ ಇಳಿಯ ಒಪ್ಪುತ್ತಿಲ್ಲ. ಈ ವೃದ್ಧೆಯನ್ನು ಸೌಜನ್ಯಕ್ಕೂ ಮಾತನಾಡಿಸದ ಕಂದಾಯ ಸಚಿವರ ವಿರುದ್ಧ ಗ್ರಾಮದಲ್ಲಿ ಆಕ್ರೋಶ ವ್ಯಕ್ತವಾಗಿದೆ.