ದೆಹಲಿ : ಕೇಂದ್ರ ಸಚಿವ ಬೆಳಗಾವಿಯ ಸುರೇಶ ಅಂಗಡಿ (೬೫) ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ತಮಗೆ ಕೊರೋನಾ ಸೋಂಕು ತಗುಲಿದ್ದಾಗಿ ಅವರು ಸಪ್ಟೆಂಬರ್ ೧೧ರಂದು ಟ್ವೀಟರ್ ಮೂಲಕ ಹೇಳಿಕೊಂಡಿದ್ದರು. ತಮಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಆದರೆ ತಮ್ಮ ಸಂಪರ್ಕಕ್ಕೆ ಬಂದವರು ತಪಾಸಣೆ ಮಾಡಿಕೊಳ್ಳುವಂತೆ ತಿಳಿಸಿದ್ದರು.
ನಾಲ್ಕು ಬಾರೀ ಬೆಳಗಾವಿಯ ಸಂಸದರಾಗಿ ಆಯ್ಕೆಯಾಗಿದ್ದ ಅವರನ್ನ ಇತ್ತಿಚೆಗಷ್ಟೆ ಕೇಂದ್ರ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದರು. ಎಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರ ಸಚಿವ ಹಾಗೂ ಬೆಳಗಾವಿ ಸಂಸದ ಸುರೇಶ್ ಅಂಗಡಿ ಇದೀಗ ನಿಧನರಾಗಿದ್ದಾರೆ.