ಭಟ್ಕಳ:ಭಟ್ಕಳ ಡಿವೈಎಸ್ಪಿಯಾಗಿ ಕೆ.ಯು.ಬೆಳ್ಳಿಯಪ್ಪ ಬುಧವಾರ ಅಧಿಕಾರ ಸ್ವೀಕರಿಸಿದರು. ನಗರ ಪೊಲೀಸ್ ಕಮೀಷನರೇಟ್ನ ಪಣಂಬೂರು ಉಪವಿಭಾಗ (ಉತ್ತರ) ಸಹಾಯಕ ಆಯಕ್ತರಾಗಿದ್ದ ಅವರನ್ನು ಭಟ್ಕಳ ಡಿವೈಎಸ್ಪಿಯಾಗಿ ವರ್ಗಾವ ಮಾಡಲಾಗಿತ್ತು. 2013ರಲ್ಲಿ ಭಟ್ಕಳದಲ್ಲಿ ಸಿಪಿಐಯಾಗಿ ಕೆಲಸ ಮಾಡಿದ ಅವರು ಅಪರಾಧಿಗಳಿಗೆ ಸಿಂಹಸ್ವಪ್ನರಾಗಿದ್ದ ಪೊಲೀಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿಯೆಂದೇ ಗುರುತಿಸಿಕೊಂಡಿದ್ದ ಅವರು ತಾಲೂಕಿನಲ್ಲಿ ಶಾಂತಿ ಕಾಪಾಡುವಲ್ಲಿ ಉತ್ತಮ ಹೆಸರು ಗಳಿಸಿ ವರ್ಗಾವಣೆಗೊಂಡಿದ್ದು ಇಲ್ಲಿ ಸ್ಮರೀಸಬಹುದಾಗಿದೆ.