ಭಟ್ಕಳ: ಮನೆಯ ಮಹಡಿ ಮೇಲೆ ಆಟವಾಡುತ್ತಿದ್ದ ಇಬ್ಬರು ಸಹೋದರರಲ್ಲಿ ಓರ್ವ ಸಹೋದರ ಕೆಳಗೆ ಬೀಳುತ್ತಿರುವುದನ್ನು ತಪ್ಪಿಸಲು ಹೋಗಿ ವಿದ್ಯುತ್ ತಂತಿ ಸ್ಪರ್ಷಿಸಿ ಮೃತಪಟ್ಟರೆ ಮತ್ತೋರ್ವ ಸಹೋದರ ಕೆಳಗೆ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ಬುಧವಾರ ಸಂಜೆ ಕಾರ್ ಸ್ಟ್ರೀಟ್ ನಲ್ಲಿರುವ ಕಾರ್ಪೋರೇಷನ್ ಬ್ಯಾಂಕ್ ಎದರು ನಡೆದಿದೆ.
ಮೃತ ಬಾಲಕರನ್ನು ಮನಿಯಾರ್ ಫಾರೂಕ್ ರ ಪುತ್ರರಾದ ಫಹದ್ ಮನಿಯಾರ್(೧೮) ಹಾಗೂ ಆಂಜಾಫ್ ಮನಿಯಾರ(೧೪) ಎಂದು ಗುರತಿಸಲಾಗಿದೆ.
ಬುಧವಾರ ಸಂಜೆ ಇಬ್ಬರು ಸಹೋದರರು ತಮ್ಮ ಮನೆಯ ಮಹಡಿಯ ಮೇಲೆ ಆಟವಾಡುತ್ತಿದ್ದರು ಎಂದು ಹೇಳಲಾಗಿದ್ದು ಕಾಲು ತಮ್ಮ ಕೆಳಗೆ ಬೀಳುತ್ತಿರುವುದನ್ನು ತಪ್ಪಿಸಲು ಅಣ್ಣ ಫಹದ್ ನು ಮೆಲ್ಗಡೆ ಯಿಂದ ಹಾದು ಹೋಗಿರುವ ವಿದ್ಯುತ್ ತಂತಿಯನ್ನು ಸ್ಪರ್ಷಿಸಿದ್ದಾನೆ. ಇದೇ ವೇಳೆ ತಮ್ಮ ಅಂಜಾಫ್ ಕೈಜಾರಿ ನೆಲದ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಅತ್ತ ವಿದ್ಯುತ್ ತಂತಿ ಸ್ಪರ್ಷಿಸಿದ ಅಣ್ಣ ಅಸ್ಪತ್ತೆಗೆ ಸಾಗಿಸುವ ಮದ್ಯೆದಲ್ಲೇ ಸಾವನ್ನಪ್ಪಿದ್ದು ಗಂಭೀರವಾಗಿ ಗಾಯಗೊಂಡಿರುವ ಅಂಝಾಫ್ ನನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
.