ಶಿರಸಿ : ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶನಗರದ ಮಂಜುನಾಥ ಕಾಲೋನಿಯ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರು ಕಳ್ಳರನ್ನ ಪೊಲೀಸರು ಬಂಧಿಸಿದ್ದಾರೆ.
ಹಾನಗಲ್ ಮೂಲದ ಅಬ್ದುಲ್ ಸತ್ತಾರ್ ದೊಡ್ಡಮನಿ (24), ಹಾಗೂ ) ಅಜಯ್ ರಾಜು ನಾಯ್ಡು,(19) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ಒಟ್ಟು 1,30,400 ರೂ. ಮೌಲ್ಯದ ಬಂಗಾರದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕಳೆದ ಜೂನ್ 22 ರಂದು ಇವರಿಬ್ಬರು ಮನೆ ಕಳ್ಳತನ ನಡೆಸಿ ಪರಾರಿಯಾಗಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹಾಗೂ ಅಡಿಷನಲ್ ಎಸ್ಪಿ ಬದರಿನಾಥ , ಶಿರಸಿ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕರಾದ ಪ್ರದೀಪ ಯು ಹಾಗೂ ಶಿರಸಿ ಗ್ರಾಮೀಣ ಪೊಲೀಸ ಠಾಣೆಯ ನಂಜಾನಾಯ್ಕ್, ಪಿ.ಎಸ್.ಐ, ಶ್ಯಾಮ್ ಪಾವಸ್ಕರ, ಅಂಕೋಲಾ ಪಿಎಸೈ ಸಂಪತಕುಮಾರ, ಪ್ರೊಬೆಶನರಿ ಪಿಎಸ್ಐ ನಾಗೇಂದ್ರ ನಾಯ್ಕ ಸೇರಿ ಇತರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.